ಸುದ್ದಿ ಕಣಜ.ಕಾಂ | DISTRICT | POLICE NEWS
ಶಿವಮೊಗ್ಗ: ರಾಜ್ಯದ ಹಲವೆಡೆ ತಮ್ಮ ಕಾರ್ಯದಕ್ಷತೆಯಿಂದ ಜನಮಾನಸದಲ್ಲಿ ಬೇರೂರಿರುವ ಐಪಿಎಸ್ ಅಧಿಕಾರಿ ವಿಕ್ರಂ ಆಮ್ಟೆ ಅವರು ಶಿವಮೊಗ್ಗದ ನೂತನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜನೆಗೊಡಿದ್ದಾರೆ.
ಈ ಕುರಿತು ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದ್ದು, ಬೆಳಗಾವಿ ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿದ್ದ ವಿಕ್ರಂ ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.
ಡಾ.ಎಚ್.ಟಿ.ಶೇಖರ್ ಅವರು ಕೆ.ಎಸ್.ಪಿ.ಎಸ್.ನಿಂದ ಐಪಿಎಸ್ ಆಗಿ ಬಡ್ತಿ ಹೊಂದಿ ಬೇರೆಡೆ ವರ್ಗಾವಣೆ ಆಗಿರುವುದರಿಂದ ಈ ಜಾಗಕ್ಕೆ ವಿಕ್ರಂ ಅವರನ್ನು ನಿಯೋಜನೆ ಮಾಡಲಾಗಿದೆ.
ವಿಕ್ರಂ ಅವರು ಬೆಳಗಾವಿಯಲ್ಲಿ ಮಟ್ಕಾ, ಜೂಜು ಸೇರಿದಂತೆ ಲಾಕ್ ಡೌನ್ ಸಂದರ್ಭದಲ್ಲೂ ಖಡಕ್ ಕಾರ್ಯಾಚರಣೆಗಳ ಮೂಲಕ ಜನಸ್ನೇಹಿಯಾಗಿದ್ದಾರೆ.