ಸುದ್ದಿ ಕಣಜ.ಕಾಂ | CITY | RAILWAY OVER BRIDGE
ಶಿವಮೊಗ್ಗ: ನಗರದ ಸವಳಂಗ ರಸ್ತೆಯ ರೈಲ್ವೆ ಗೇಟ್ ಓವರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವುದರಿಂದ ಸುಗಮ ಸಂಚಾರಕ್ಕಾಗಿ ಈ ಭಾಗದಲ್ಲಿ ಸಂಚರಿಸುವ ವಾಹನಗಳ ಚಾಲಕರು, ಕಾಮಗಾರಿ ಪೂರ್ಣಗೊಳ್ಳುವವರೆಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಡಿಸಿ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.
ಪರ್ಯಾಯ ಮಾರ್ಗಗಳ ಮಾಹಿತಿ
ಮಾರ್ಗ 1- ಶಿವಮೊಗ್ಗದಿಂದ ಸವಳಂಗ ಕಡೆಗೆ ಸಂಚರಿಸುವ ವಾಹನಗಳು ಶಿವಮೊಗ್ಗ ಬಸ್ ನಿಲ್ದಾಣ- ಸಾಗರ ರಸ್ತೆ- ಆಲ್ಕೊಳ ಸರ್ಕಲ್ – ಪೊಲೀಸ್ ಚೌಕಿ- ಮೇದಾರ್ಕೇರಿ -ಬೊಮ್ಮನಕಟ್ಟೆ ರೈಲ್ವೇ ಗೇಟ್ – ಬಸವನಗಂಗೂರು – ಹುಣಸೋಡು- ಅಬ್ಬಲಗೆರೆ ಎಡಕ್ಕೆ ತಿರುಗಿ ಸವಳಂಗ ರಸ್ತೆಗೆ ಸೇರುವುದು. ಸವಳಂಗ ಕಡೆಯಿಂದ ಶಿವಮೊಗ್ಗ ನಗರಕ್ಕೆ ಬರುವ ಬಸ್ ಮತ್ತು ಶಾಲಾ ವಾಹನಗಳು ನವುಲೆ ಗಣಪತಿ ದೇವಸ್ಥಾನದ ಎಡಕ್ಕೆ ತಿರುಗಿ ತ್ರಿಮೂರ್ತಿ ನಗರ- ರಾಗಿಗುಡ್ಡ ಚಾನಲ್ ಬಲಗಡೆ ಏರಿ ಮೇಲಿಂದ ಮಲ್ಲಿಕಾರ್ಜುನ ನಗರ- ನೆಕ್ಸಾ ಶೋ ರೂಂ ಹತ್ತಿರ ಬಲಗಡೆ- ಹೊನ್ನಾಳಿ ರಸ್ತೆ – ಸಂಗೊಳ್ಳಿ ರಾಯಣ್ಣ ಸರ್ಕಲ್- ಕೆ.ಇ.ಬಿ. ಸರ್ಕಲ್ – ಶಂಕರಮಠ ಸರ್ಕಲ್ ಮುಖಾಂತರ ಚಲಿಸಲು ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಮಾರ್ಗ 2- ಶಿವಮೊಗ್ಗದಿಂದ ಸವಳಂಗ ಕಡೆಗೆ ಸಂಚರಿಸುವ ಲಘು ವಾಹನಗಳು ಶಿವಮೊಗ್ಗ ಬಸ್ ನಿಲ್ದಾಣ- ಉಷಾ ನರ್ಸಿಂಗ್ ಹೋಂ ಕಡೆಯಿಂದ ಬರುವ ವಾಹನಗಳು- ರಾಜಕುಮಾರ್ ಸರ್ಕಲ್(ಮೇದಾರಕೇರಿ)- ಬೊಮ್ಮನಕಟ್ಟೆ ರೈಲ್ವೇ ಗೇಟ್ ಬಲಗಡೆಯಿಂದ -ಕೀರ್ತಿನಗರ-ಅಶ್ವಥ್ನಗರ-ಎಲ್.ಬಿ.ಎಸ್.ನಗರ 2ನೇ ಕ್ರಾಸ್ ಮೂಲಕ ಸವಳಂಗ ರಸ್ತೆ ಸೇರಬೇಕು. ಸವಳಂಗ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಲಘು ವಾಹನಗಳು ನವುಲೆ ಗಣಪತಿ ದೇವಸ್ಥಾನದಿಂದ ತ್ರಿಮೂರ್ತಿನಗರ-ರಾಗಿಗುಡ್ಡ ಚಾನಲ್ ಹತ್ತಿರ ಬಲಕ್ಕೆ ತಿರುಗಿ-ಚಾನಲ್ ಏರಿ ಮೇಲೆಯಿಂದ ಮಲ್ಲಿಕಾರ್ಜುನ ನಗರ, ನೆಕ್ಸಾ ಶೋ ರೂಂ ಹತ್ತಿರ ಬಲಗಡೆ – ಹೊನ್ನಾಳಿ ರಸ್ತೆ-ಸಂಗೊಳ್ಳಿ ರಾಯಣ್ಣ ಸರ್ಕಲ್-ಕೆ.ಇ.ಬಿ. ಸರ್ಕಲ್, ಶಂಕರಮಠ ಸರ್ಕಲ್ ಮುಖಾಂತರ ಚಲಿಸಲು ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಮಾರ್ಗ 4- ಎಂ.ಆರ್.ಎಸ್. ಸರ್ಕಲ್ – ಸಂದೇಶ ಮೋಟಾರ್ಸ್ ಸರ್ಕಲ್ – ಗೋಪಾಳ – ಆಲ್ಕೊಳ ಸರ್ಕಲ್-ಆಯನೂರು -ಹಾರ್ನಳ್ಳಿ-ಸವಳಂಗ ಮಾರ್ಗವಾಗಿ ಸಂಚರಿಸಬೇಕು. ಸವಳಂಗದಿಂದ ಶಿವಮೊಗ್ಗ ಕಡೆಗೆ ಬರುವ ಲಾರಿ ಮತ್ತು ಭಾರೀ ವಾಹನಗಳು ಸವಳಂಗ -ಹಾರ್ನಳ್ಳಿ-ಆಯನೂರು-ಆಲ್ಕೊಳ ಸರ್ಕಲ್-ಗೋಪಾಳ-ಸಂದೇಶ ಮೋಟಾರ್ಸ್ ಸರ್ಕಲ್ ಮೂಲಕ ಸಂಚರಿಸಲು ಅನುಕೂಲವಾಗುವಂತೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
https://www.suddikanaja.com/2022/01/04/savalanga-road-railway-over-bridge-work-progress-at-shivamogga-due-to-this-work-district-administration-order-for-alternate-routes/