ಸುದ್ದಿ ಕಣಜ.ಕಾಂ | TALUK | MARIKAMBA JATRE
ಶಿಕಾರಿಪುರ: ಜನವರಿ 18 ಮತ್ತು 19ರಂದು ಶಿಕಾರಿಪುರ (shikaripura)ದಲ್ಲಿ ನಡೆಯಬೇಕಿದ್ದ ಶ್ರೀ ಮಾರಿಕಾಂಬ ಜಾತ್ರೆ(marikamba jatre)ಯನ್ನು ಕೋವಿಡ್ (covid) ಮೂರನೇ ಅಲೆ (third wave) ಹಿನ್ನೆಲೆ ರದ್ದುಪಡಿಸಲಾಗಿದೆ.
ಭಾನುವಾರ ಕರೆದಿದ್ದ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಗಿದೆ. ಕೊರೊನಾ ವೈರಾಣು(corona virus)ವಿನ ಸೋಂಕು ಜಿಲ್ಲೆಯಲ್ಲಿ ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆ ಜಾತ್ರೆ ಆಚರಣೆಯನ್ನು ರದ್ದುಪಡಿಸಲಾಗಿದೆ. ಆದರೆ, ಕೆಲವು ನಿರ್ಬಂಧಗಳನ್ನು ಹೇರಿ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಲಾಗಿದೆ.
ಜಾತ್ರೆಯಲ್ಲಿ ನಡೆಯುವ ವಸ್ತು ಪ್ರದರ್ಶನ, ಕುಸ್ತಿ, ಕುರಿ ಕಾಳಗ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ. ದೇವಿ ಪ್ರತಿಷ್ಠಾಪನೆ, ಧಾರ್ಮಿಕ ವಿಧಿ ವಿಧಾನಗಳನ್ನು ಕೋವಿಡ್ ಮಾರ್ಗಸೂಚಿ (covid guidelines) ಅನ್ವಯ ಆಚರಿಸಲು ಅವಕಾಶ ನೀಡಲಾಗಿದೆ.
ಉತ್ಸಾಹದ ಮೇಲೆ ತಣ್ಣೀರು ಎರಚಿದ ಕೋವಿಡ್
ಮಾರಿಕಾಂಬ ಜಾತ್ರೆಯನ್ನು ಮಾಡುವುದಕ್ಕೆ ಕಳೆದ ಒಂದು ತಿಂಗಳಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತಿತ್ತು. ದೇವಸ್ಥಾಕ್ಕೆ ದೀಪಾಲಂಕಾರ ಕೂಡ ಮಾಡಲಾಗಿದೆ. ಆದರೆ, ಕೋವಿಡ್ ಇದೆಲ್ಲದರ ಮೇಲೆ ತಣ್ಣೀರು ಎರಚಿದೆ.
ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ್ ಕವಿರಾಜ್ ವಹಿಸಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ಹುಲ್ಮಾರ್ ಮಹೇಶ್, ಪುರಭಸೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ ಉಪಸ್ಥಿತರಿದ್ದರು.
https://www.suddikanaja.com/2021/01/28/khandya-cricket-tourney-cancelled-in-chikkamagaluru/