ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಮಳಲಿಕೊಪ್ಪ ಚಾನೆಲ್ ಹತ್ತಿರದ ಶಂಕ್ರಪ್ಪ ಅವರ ಕ್ರಷರ್ ಗೆ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯ ಭೋವಿ ಕಾಲೋನಿ ನಿವಾಸಿ ಅಭಿಷೇಕ್(20), ಶಿವಮೊಗ್ಗದ ಇಂದಿರಾನಗರ ನಿವಾಸಿಗಳಾದ ವಿಶ್ವನಾಥ್(33), ಕಿರಣ್ ಕುಮಾರ್ (25), ಉಂಬ್ಳೆಬೈಲಿನ ಸುಮಿತ್ ಅಲಿಯಾಸ್ ಸುಮಂತ್(22), ಭದ್ರಾವತಿಯ ಗಾಂಧಿನಗರ ನಿವಾಸಿ ಕಿರಣ್ (25) ಎಂಬುವವರನ್ನು ಬಂಧಿಸಲಾಗಿದೆ.
ಐದು ಜನರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಕೊಂಡು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತುಂಗಾಣಗರ ಪಿಎಸ್.ಐ ಹಾಗೂ ಸಿಬ್ಬಂದಿ ತಂಡವು ದಾಳಿ ನಡೆಸಿದೆ.
ಆರೋಪಿತರಿಂದ ಅಂದಾಜು 40,000 ರೂಪಾಯಿ ಮೌಲ್ಯದ 1 ಕೆಜಿ 130 ಗ್ರಾಂ ತೂಕದ ಒಣ ಗಾಂಜಾ, 1100 ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/11/09/huge-amount-of-ganja-seized-in-bhadravathi/