ಸುದ್ದಿ ಕಣಜ.ಕಾಂ | DISTRICT | MARIKAMBA JATRE
ಶಿವಮೊಗ್ಗ: ಕೊರೊನಾ (corona) ಸೋಂಕಿನ ಹಿನ್ನೆಲೆ ಒಂದು ತಿಂಗಳು ವಿಳಂಬವಾಗಿ ಅಂದರೆ ಮಾರ್ಚ್ 22ರಂದು ಕೋಟೆ ಶ್ರೀ ಮಾರಿಕಾಂಬ ಜಾತ್ರೆ (Kote Sri Marikamba Devi jatre) ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಬುಧವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಜಾತ್ರೆಯ ರೂಪುರೇಷೆಗಳ ಬಗ್ಗೆ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಕಾರ್ಯದರ್ಶಿ ಎನ್. ಮಂಜುನಾಥ್ ಮಾಹಿತಿ ನೀಡಿದ್ದಾರೆ.
READ | ಶಿವಮೊಗ್ಗದಲ್ಲಿ ಕೊವೀಡ್ ಗೆ ಮತ್ತೊಂದು ಬಲಿ, ಇಂದು ಭದ್ರಾವತಿಯಲ್ಲಿ ಅತ್ಯಧಿಕ ಪಾಸಿಟಿವ್, ತಾಲೂಕುವಾರು ಮಾಹಿತಿ
ಸಮಿತಿಯ ಪ್ರಮುಖ 3 ತೀರ್ಮಾನಗಳು
- ಮಾರಿಕಾಂಬ ಜಾತ್ರೆ ಫೆ.22ರ ಬದಲಿಗೆ ಮಾರ್ಚ್ 22ರಂದು ನಡೆಯಲಿದೆ. ಸೋಂಕು ಹರಡದಂತೆ ಕೋವಿಡ್ ಮಾರ್ಗಸೂಚಿ (covid guidelines) ಕಟ್ಟುನಿಟ್ಟಿನಿಂದ ಪಾಲಿಸಲಾಗುವುದು.
- ಈ ಸಲ ದೇವಸ್ಥಾನ ಸುತ್ತ ಯಾವ ಅಂಗಡಿಗಳು ಹಾಗೂ ವಸ್ತು ಪ್ರದರ್ಶನ ಇರುವುದಿಲ್ಲ. ಭಕ್ತರು ಸಾಮಾಜಿಕ ಅಂತರ(social distance)ದೊಂದಿಗೆ ದೇವಿಯ ದರ್ಶನ ಪಡೆಯಬೇಕು.
- ಜಾತ್ರೆಯ ವಿಧಿ ವಿಧಾನಗಳು ಯಥಾ ಪ್ರಕಾರ ನಡೆಯಲಿವೆ. ಜನವರಿ 28ರಂದು ಮರ ತರಿಸಿ ತವರು ಮನೆಯಲ್ಲಿ ಇಡಲಾಗುವುದು. ಸಾಮಾನ್ಯವಾಗಿ ಶೂನ್ಯ ಮಾಸದಲ್ಲಿಯೇ ಮರ ತರುತ್ತಾರೆ. ಒಂದು ಮರ ತಂದರೆ ತಾಯಿಯನ್ನು ಕೂರಿಸಲೇ ಬೇಕಾಗುತ್ತದೆ.
- ಮಾರ್ಚ್ ನಲ್ಲಿ ಜಾತ್ರೆಯನ್ನು ಆಚರಿಸಲು ನಿರ್ಧರಿಸಿದ್ದು, ಅದು ಸಹ ಆಗಿನ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆ ಮಾಡಲಾಗುವುದು.
- ಎಂದಿನಂತೆ ನಾಡಿಗರ ಮನೆಯಿಂದ ಹಿಡಿದು ವಿವಿಧ ಜಾತಿಗಳ ನೇತೃತ್ವದಲ್ಲಿ ಎಂದಿನಂತೆ ವಿಧಿ ವಿಧಾನ, ಪೂಜೆ ಶಾಸ್ತ್ರೋಕ್ತವಾಗಿ ನಡೆಯಲಿವೆ. ಆದರೆ, ಜಾತ್ರೆ 3 ಅಥವಾ 4 ದಿನ ನಡೆಸಬೇಕು ಎಂಬ ಬಗ್ಗೆ ಇದುವರೆಗೆ ನಿರ್ಧರಿಸಿಲ್ಲ.
ಮಹಾನಗರ ಪಾಲಿಕೆ (shivamogga city corporation) ಮೇಯರ್ (mayor) ಸುನೀತಾ ಅಣ್ಣಪ್ಪ ಮಾತನಾಡಿ, ನಿಯಮಾನುಸಾರ ಮಾರಿಕಾಂಬ ಜಾತ್ರೆ ನಡೆಸಲಾಗುವುದು. ಈ ಬಾರಿ ಪಾಲಿಕೆ ವತಿಯಿಂದ ಜಾತ್ರೆಗೆ ₹10 ಲಕ್ಷ ನೀಡಲಾಗುವುದು ಎಂದರು.
ಮಾಧ್ಯಮಗೋಷ್ಠಿಯಲ್ಲಿ ಪ್ರಮುಖರಾದ ಡಿ.ಎಂ. ರಾಮಯ್ಯ, ಸೀತಾರಾಮ ನಾಯಕ, ತಿಮ್ಮಣ್ಣ, ಲೋಕೇಶ್, ಸತ್ಯನಾರಾಯಣ, ಚಂದ್ರಶೇಖರ್, ತುಕ್ಕೋಜಿರಾವ್, ಸುನಿಲ್, ವಿ.ರಾಜು, ಸುಧೀರ್, ಭಾನು, ಶ್ರೀಧರಮೂರ್ತಿ ನವಲೆ, ಷಣ್ಮುಖಪ್ಪ ಉಪಸ್ಥಿತರಿದ್ದರು.
ಶಿವಮೊಗ್ಗ ಮಾರಿಕಾಂಬ ಜಾತ್ರೆ ಬಗ್ಗೆ ಪ್ರಮುಖ ನಿರ್ಧಾರ ಪ್ರಕಟಿಸಿದ ಜಿಲ್ಲಾಡಳಿತ