ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಅರೆಬಿಳಚಿ ಕ್ಯಾಂಪ್ ನ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಹಾಯ್ ಹೊಳೆ ಗ್ರಾಮದ ನಿವಾಸಿ ಸುರೇಶ್ ಅಲಿಯಾಸ್ ಕರಡಿ(24),ಮಿಳ್ಳಘಟ್ಟ ನಿವಾಸಿಗಳಾದ ಪ್ರವೀಣ್(22), ಅಭಿಷೇಕ್(22), ಗಾಜನೂರಿನ ಶಿವಕುಮಾರ್(23) ಎಂಬುವವರನ್ನು ಬಂಧಿಸಲಾಗಿದೆ.
ಹೊಳೆಹೊನ್ನೂರು ಠಾಣೆಯ-1, ತುಂಗಾನಗರ ಠಾಣೆಯ-2 ಮತ್ತು ತೀರ್ಥಹಳ್ಳಿ ಠಾಣೆಯ 1 ಪ್ರಕರಣ ಸೇರಿ 04 ಸುಲಿಗೆ ಪ್ರಕರಣಗಳು ಮತ್ತು ಹೊಳೆಹೊನ್ನೂರು ಹಾಗೂ ಮಾಳೂರು ಪೊಲೀಸ್ ಠಾಣೆಯ 2 ಮನೆಗಳ್ಳತನ ಪ್ರಕರಣಗಳು ಮತ್ತು ಹೊಳೆಹೊನ್ನೂರು ಠಾಣೆಯ-4, ತುಂಗಾನಗರ ಠಾಣೆಯ -1, ಶಿಕಾರಿಪುರ ಟೌನ್ ಠಾಣೆಯ-1, ಶಿವಮೊಗ್ಗ ಗ್ರಾಮಾಂತರ ಠಾಣೆಯ-1 ಮತ್ತು ರಿಪ್ಪನ್ ಪೇಟೆ ಠಾಣೆಯ 1 ಪ್ರಕರಣ ಸೇರಿ 8 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರು. ಒಟ್ಟು 52 ಗ್ರಾಂ 540 ಮಿಲಿ ತೂಕದ ಬಂಗಾರದ ಆಭರಣಗಳು, 8 ದ್ವಿ ಚಕ್ರ ವಾಹನಗಳು ಮತ್ತು 1 ಸೋನಿ ಟಿವಿಯನ್ನು ವಶಪಡಿಸಿಕೊಂಡಿರುತ್ತದೆ.
ಹೊಳೆಹೊನ್ನೂರು ಪೊಲೀಸರ ಕಾರ್ಯಾಚರಣೆ
ಆರೋಪಿಗಳು ಭದ್ರಾವತಿಯಲ್ಲಿ 2021ರ ಡಿಸೆಂಬರ್ 29ರಂದು ವ್ಯಕ್ತಿಯೊಬ್ಬರು ತನ್ನ ಪತ್ನಿಯ ಹೆರಿಗಾಗಿ ಭದ್ರಾವತಿಯ ನಿರ್ಮಲಾ ಆಸ್ಪತ್ರೆಗೆ ಹೋಗಿದ್ದು ಜನವರಿ 4 ರಂದು ಮನೆಗೆ ವಾಪಾಸ್ ಬಂದಿದ್ದಾರೆ. ಆಗ ಮನೆಯ ಬೀಗವನ್ನು ಒಡೆದು ಟಿ.ವಿ ಹಾಗೂ 50,000 ರೂಪಾಯ ನಗದು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಹೊಳೆಹೊನ್ನೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
https://www.suddikanaja.com/2021/09/17/arecanut-theft-after-increasing-price/