ಸುದ್ದಿ ಕಣಜ.ಕಾಂ | DISTRICT | CINEMA SHOOTING
ಶಿವಮೊಗ್ಗ: ನವರಸ ನಾಯಕ, ಚಿತ್ರನಟ ಜಗ್ಗೇಶ್ ಅಭಿನಯದ `ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ಚಿತ್ರೀಕರಣ ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದು, ಜಗ್ಗೇಶ್ ಅವರು ಬಿಡುವಿನ ಸಮಯದಲ್ಲಿ ಕುಪ್ಪಳಿಗೆ ಭೇಟಿ ನೀಡಿದ್ದಾರೆ.
ಕವಿಮನೆಯ ಮುಂದೆ ಜಗ್ಗೇಶ್ ಅವರು ಫೋಟೊ ಕ್ಲಿಕ್ಕಿಸಿಕೊಂಡಿರುವ ಜಗ್ಗೇಶ್ ಅವರು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
READ | ಶಿವಮೊಗ್ಗದ ಈ ಕುಗ್ರಾಮದಲ್ಲಿ ಮೂರು ಸರ್ಕಾರಿ ಶಾಲೆಗಳಿಗೆ ಬೀಗ
ಕುಪ್ಪಳಿ ಪರಿಸರ ಕಣ್ತುಂಬಿಕೊಂಡ ಜಗ್ಗೇಶ್
ನಟ ಜಗ್ಗೇಶ್ ಅವರು ಕುಪ್ಪಳಿಯಲ್ಲಿರುವ ರಾಷ್ಟ್ರ ಕವಿ ಕುವೆಂಪು ಅವರ ಮನೆಗೆ ಭೇಟಿ ನೀಡಿದ್ದು, ಸುಂದರವಾದ ಪರಿಸರದಲ್ಲಿ ಕೆಲಹೊತ್ತು ವಿಹರಿಸಿ ನಿಸರ್ಗವನ್ನು ಕಣ್ತುಂಬಿಕೊಂಡಿದ್ದಾರೆ.
ಫೋಟೊ ಕ್ಲಿಕ್ಕಿಸಿಕೊಂಡ ನಟ
ಸಾಮಾಜಿಕ ಜಾಲತಾಣದಲ್ಲಿ ಕುಪ್ಪಳಿಗೆ ಭೇಟಿ ನೀಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಕವಿಶೈಲ, ಕವಿಮನೆ ಹೀಗೆ ವಿವಿಧೆಡೆ ಭೇಟಿ ನೀಡಿ ಮಾಹಿತಿ ಪಡೆದರು.