ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ‘ಒಂದುವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ಸಂಘಟನೆ ಮಾಡು ಎಂದರೆ ನಾನು ಅದಕ್ಕೂ ರೆಡಿ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪುನರುಚ್ಛಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರಪ್ಪ, ಕೇಂದ್ರ, ರಾಜ್ಯ ನಾಯಕರು ಹಾಗೂ ಸಂಘ ಪರಿವಾರದವರೂ ರಾಜೀನಾಮೆ ನೀಡುವಂತೆ ತಿಳಿಸಿದರೆ, ಅದಕ್ಕೆ ಸಿದ್ದ ಎಂದರು.
ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಹೀಗಾಗಿ, ರಾಜೀನಾಮೆ, ಯಾರಿಗೆ ಸ್ಥಾನ ಸಿಗುತ್ತದೆ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ಸಾಮಾನ್ಯ ಎಂದರು.
READ | ಶಿವಮೊಗ್ಗ ಉಸ್ತುವಾರಿ ಸಚಿವರು ಬದಲು, ಬಿಜೆಪಿ ಅವಧಿಯಲ್ಲಿ ಇದೇ ಮೊದಲ ಸಲ ಬೇರೊಬ್ಬರಿಗೆ ಜಿಲ್ಲೆಯ ಹೊಣೆ
ಮುಂದಿನ ವಿಧಾನಸಭೆ ಚುನಾವಣೆಗೆ 1 ವರ್ಷ 3 ತಿಂಗಳು ಬಾಕಿ ಇದೆ. ರಾಷ್ಟ್ರೀಯ ನಾಯಕರು ಸಂಪುಟ ವಿಸ್ತರಣೆ ಬಗ್ಗೆ ಕುಳಿತು ಚರ್ಚೆ ಮಾಡುತ್ತಾರೆ. ಯಾರಿಗೆ ಅವಕಾಶ ಕೊಟ್ಟರೆ ಒಳ್ಳೆಯದು ಎಂದು ಚಿಂತನೆ ಮಾಡುತ್ತಾರೆ ಎಂದು ತಿಳಿಸಿದರು.
ಹುದ್ದೆ ಖಾಲಿ ಇದ್ದಾಗ ಆಕಾಂಕ್ಷೆ ಸ್ವಾಭಾವಿಕ
ಸರ್ಕಾರದಲ್ಲಿ ಹುದ್ದೆಗಳು ಖಾಲಿ ಇದ್ದಾಗ ಚರ್ಚೆಗಳು ನಡೆಯುವುದು, ರಾಜಕೀಯ ಆಕಾಂಕ್ಷಿಗಳು ಇರುವುದು ಸಹಜ. ಸಚಿವನಾಗಬೇಕು ಎಂಬುವುದು ಶಾಸಕರು, ವಿಧಾನ ಪರಿಷತ್ ಸದಸ್ಯರ ಅಪೇಕ್ಷೆಯಾಗಿರುತ್ತದೆ. ಅದು ತಪ್ಪಲ್ಲ. ಸ್ಥಾನ ಕೊಡುವುದು ಕೇಂದ್ರಕ್ಕೆ ಬಿಟ್ಟಿದ್ದು ಎಂದರು.
ಒಬ್ಬರೇ ಇದ್ದಾಗ ತಪ್ಪಿಯೂ ಅಪರಿಚಿತರಿಗೆ ಲಿಫ್ಟ್ ಕೇಳ್ಬೇಡಿ, ಬೈಕ್ ನಲ್ಲಿ ಲಿಫ್ಟ್ ಕೊಡುವ ನೆಪದಲ್ಲಿ ನಡೀತು ದರೋಡೆ