ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಮೂರನೇ ಅಲೆಯಲ್ಲಿ ಕಳೆದ 24 ದಿನಗಳಲ್ಲಿ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 1,079 ಮಂದಿ ಮೃತಪಟ್ಟಿದ್ದಾರೆ.
ಶಿವಮೊಗ್ಗದಲ್ಲಿ 104, ಭದ್ರಾವತಿಯಲ್ಲಿ 24, ತೀರ್ಥಹಳ್ಳಿಯಲ್ಲಿ 19, ಶಿಕಾರಿಪುರದಲ್ಲಿ 49, ಸಾಗರದಲ್ಲಿ 62, ಹೊಸನಗರದಲ್ಲಿ 25, ಸೊರಬದಲ್ಲಿ 13 ಹಾಗೂ ಹೊರ ಜಿಲ್ಲೆಯ 8 ಜನರಿಗೆ ಕೊರೊನಾ ಸೋಂಕು ತಗುಲಿದೆ.
READ | ಮಕ್ಕಳಲ್ಲಿ ಕೋವಿಡ್ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ಇದನ್ನು ಮಾಡಿ, ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ್ ಸರ್ಜಿ ಸಲಹೆಗಳೇನು?
3 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ
304 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, 279 ಜನ ಗುಣಮುಖರಾಗಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ 55, ಡಿಸಿಎಚ್.ಸಿಯಲ್ಲಿ 36, ಖಾಸಗಿ ಆಸ್ಪತ್ರೆಯಲ್ಲಿ 12, ಮನೆ ಆರೈಕೆಯಲ್ಲಿ 2,975, ಟ್ರಯಾಜ್ ನಲ್ಲಿ 17 ಜನ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ 3,095 ಸಕ್ರಿಯ ಪ್ರಕರಣಗಳಿವೆ.
ಇಂದು 3,239 ಮಾದರಿಗಳನ್ನು ಸಂಗ್ರಹಿಸಿದ್ದು, ಹಿಂದಿನದ್ದೂ ಸೇರಿ 1,663 ವರದಿಗಳು ನೆಗೆಟಿವ್ ಬಂದಿವೆ. ಶಿಕ್ಷಣ ಸಂಸ್ಥೆಯಲ್ಲಿ 457 ಮಾದರಿಗಳನ್ನು ಸಂಗ್ರಹಿಸಿದ್ದು, 78 ಪಾಸಿಟಿವ್ ಬಂದಿವೆ.
https://www.suddikanaja.com/2022/01/20/covid-3rd-wave-expert-advice-on-school-opening-in-shimoga-top-5-instruction-of-doctors/