ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಬೇರೆ ಜಿಲ್ಲೆಯ ಉಸ್ತುವಾರಿಯನ್ನು ನೀಡಿ ಸರ್ಕಾರ ನಿರ್ಧರಿಸಿದ್ದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಗಳವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಆರಗ ಜ್ಞಾನೇಂದ್ರ ಹೇಳಿದ್ದೇನು?
ಉಸ್ತುವಾರಿಗಳನ್ನು ಬದಲಿಸುವ ವಿಷಯ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು. ಕೆಲಸ ಮಾಡುವವರಿಗೆ ಯಾವ ಜಿಲ್ಲೆಯಾದರೇನು, ಕೆಲಸ ಮಾಡುತ್ತೇವೆ. ಬದಲಾವಣೆ ಮಾಡಿದ್ದಕ್ಕೆ ಯಾವುದೇ ಅಸಮಾಧಾನವಿಲ್ಲ.
READ | ಶಿವಮೊಗ್ಗದ್ದೂ ಸೇರಿ ರಾಜ್ಯದ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಲು 500 ಕೋಟಿ ರೂ. ಮೀಸಲು
ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?
ದೇವರ ಪಲ್ಲಕ್ಕಿ ಹೊರುವವರಿಗೆ ಎಡಕ್ಕಾದರೂ ಬಲಕ್ಕಾದರೂ ಅಷ್ಟೆ. ದೇವರ ಪಲ್ಲಕ್ಕಿ ಹೊರುವ ವ್ಯವಸ್ಥೆ ಇದು. ರಾಜ್ಯದ ಆಡಳಿತದಲ್ಲಿ ಜನತೆಯೇ ದೇವರಿದ್ದಂತೆ. ಈ ಜಿಲ್ಲೆ ಬೇಕು, ಆ ಜಿಲ್ಲೆ ಬೇಕು ಎಂಬ ಚರ್ಚೆ ಆಗೋದು ಸರಿಯಲ್ಲ.
ಇದುವರೆಗೆ ನಾನು ಶಿವಮೊಗ್ಗ ಜಿಲ್ಲೆಗಷ್ಟೇ ಇದ್ದೆ. ಇದೀಗ ಚಿಕ್ಕಮಗಳೂರಿಗೂ ಹೋಗುತ್ತಿದ್ದೇನೆ. ಅಲ್ಲಿನ ಪರಿಸ್ಥಿತಿ ತಿಳಿದುಕೊಳ್ಳುವೆ. ಅದೇ ರೀತಿ ಬೇರೆಯವರು ಬಂದು ಇಲ್ಲಿಯ ಸ್ಥಿತಿಯನ್ನು ತಿಳಿದುಕೊಳ್ಳಲಿದ್ದಾರೆ. ಇಲ್ಲಿಯ ಅಭಿವೃದ್ಧಿ, ಕಾರ್ಯಕರ್ತರು ಮತ್ತು ಸ್ಥಳೀಯ ಶಾಸಕರ ಒಡನಾಟ ಎಲ್ಲವನ್ನು ಸಿಎಂ ಗಮನಕ್ಕೆ ತರುತ್ತಾರೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ವಿಜಯಪುರ, ಚಿಕ್ಕಮಗಳೂರು ಉಸ್ತುವಾರಿ ಸಚಿವನಾಗಿದ್ದೆ.
https://www.suddikanaja.com/2021/08/07/home-minister-portfolio-to-aaraga-jnanedra/