ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ಮಲ್ಲೇಸರ ಗ್ರಾಮದ ನಿವಾಸಿಯೊಬ್ಬರು ಜಮೀನಿನ ರಸ್ತೆ ಮತ್ತು ಬೇಲಿ ವಿಚಾರದಲ್ಲಿ ತನ್ನ ಚಿಕ್ಕಮ್ಮನಿಗೆ ತೊಂದರೆ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿಯ ಬಿಜ್ಜಳ ಗ್ರಾಮದ ಪ್ರತಾಪ್(26),ಮನೋಜ್(24),ಕೋಳಿಮಕ್ಕಿ ಗ್ರಾಮದ ಪ್ರವೀಣ್(26),ಅಲುಗೊಳ್ಳಿ ಗ್ರಾಮದ ಸಂಜಯ್(22) ಬಂಧಿತರು.
ತೊಂದರೆ ನೀಡುವುದಕ್ಕಾಗಿಯೇ ಗುಡ್ಡಕ್ಕೆ ಕರೆದೊಯ್ದು ಗಲಾಟೆ
ಚಿಕ್ಕಮ್ಮನವರಿಗೆ ತೊಂದರೆ ಕೊಡುತ್ತಿದ್ದಾನೆಂದು ಆತನಿಗೆ ಹೆದರಿಸುವ ಉದ್ದೇಶದಿಂದ, ಆರೋಪಿಗಳು ಸಂಚು ರೂಪಿಸಿ ವ್ಯಕ್ತಿಯನ್ನು ಇತ್ತೀಚೆಗೆ ರಾತ್ರಿ ಮಲ್ಲೇಸರದ ಎಂಪಿಎಂ ಗುಡ್ಡಕ್ಕೆ ಕರೆಸಿಕೊಂಡು ಗಲಾಟೆ ಮಾಡಿದ್ದಾರೆ. ನಂತರ, ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ತೀರ್ಥಹಳ್ಳಿ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.