ಸುದ್ದಿ ಕಣಜ.ಕಾಂ | KARNATAKA | REPUBLIC DAY
ಬೆಂಗಳೂರು: ಬೆಂಗಳೂರಿನಲ್ಲಿ ಏರೋಪ್ಲೇನ್ (aeroplane) ಮೂಲಕ ಶುಭಾಷಯ ಕೋರಿ ಗಣರಾಜ್ಯೋತ್ಸವ ( Republic Day) ವನ್ನು ವಿಶೇಷವಾಗಿ ಆಚರಿಸಲಾಯಿತು. ಕೆನರಾ ಬ್ಯಾಂಕ್ (Canara Bank) ನಗರದ ಜನರಿಗೆ ಗಣರಾಜ್ಯೋತ್ಸವದ ಶುಭಾಷಯಗಳನ್ನು ವಿಶೇಷವಾಗಿ ತಿಳಿಸುವ ಉದ್ದೇಶದಿಂದ ಈ ವಿನೂತನ ಹೆಜ್ಜೆ ಇಟ್ಟಿದೆ.
ಬೆಂಗಳೂರಿನ ಆಕಾರ್ ಅಡ್ವರ್ ಟೈಸಿಂಗ್ (AKAR Advertising) ಮತ್ತು ಏರಿಯಲ್ ವರ್ಕ್ಸ್ ಏರೋ ಎಲ್ಎಲ್ಪಿ ಸಂಸ್ಥೆಗಳು ಹ್ಯಾಪಿ ರಿಪಬ್ಲಿಕ್ ಡೇ ಎನ್ನುವ ಫಲಕವನ್ನು ನಗರದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಬಿತ್ತರಿಸಿದ್ದವು.
READ | ಮಕ್ಕಳಲ್ಲಿ ಕೋವಿಡ್ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ಇದನ್ನು ಮಾಡಿ, ಖ್ಯಾತ ಮಕ್ಕಳ ತಜ್ಞ ಡಾ.ಧನಂಜಯ್ ಸರ್ಜಿ ಸಲಹೆಗಳೇನು?
ಏರಿಯಲ್ ವರ್ಕ್ಸ್ ಏರೋ ಎಲ್.ಎಲ್.ಪಿ (Aerialworks Aero LLP) ಸಂಸ್ಥೆಯ ಕ್ಯಾಪ್ಟನ್ ಮುರಳಿ ಅವರು ಹಾರಿಸಿದ ವಿಮಾನದಲ್ಲಿ ಜಕ್ಕೂರಿನ ಏರೋಡ್ರೋಂ (Jakkur Aerodrome) ನಿಂದ ಫಲಕವನ್ನು ನಗರದ ಜೆ.ಸಿ ರಸ್ತೆ, ಲಾಲ್ಬಾಗ್ ಹಾಗೂ ಬೆಂಗಳೂರು ದಕ್ಷಿಣ ಭಾಗದಲ್ಲಿ ಸುಮಾರು 2 ಗಂಟೆಗಳ ಕಾಲ ಹಾರಾಟ ನಡೆಸಿ ಗಣರಾಜ್ಯೋತ್ಸವದ ಸಂದೇಶವನ್ನು ಜನರಿಗೆ ತಿಳಿಸಲಾಯಿತು.
ನಂತರ ಕ್ಯಾಪ್ಟನ್ ಮುರಳಿ ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಜಾಹೀರಾತು ಸೇವೆಯನ್ನು ಒದಗಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ನಮ್ಮ ಸಂಸ್ಥೆ ಏರಿಯಲ್ ವರ್ಕ್ಸ್ ಏರೋ ಎಲ್ಎಲ್ಪಿ, ಆಕಾರ್ ಅಡ್ವರ್ ಟೈಸಿಂಗ್ ಜೊತೆಯಾಗಿ ರಾಜ್ಯದ ಜನರಿಗೆ ಈ ವಿಶೇಷ ಸೇವೆಯನ್ನು ಪ್ರಾರಂಭಿಸಲಾಗಿದೆ. ಆಕಾಶದಲ್ಲಿ ಸುತ್ತುತ್ತ ಪ್ರೀತಿಯ ಸಂದೇಶಗಳನ್ನು ಪ್ರೀತಿಪಾತ್ರರಿಗೆ ತಲುಪಿಸುವ ಸೇವೆ ಇದಾಗಿದೆ. ಅಲ್ಲದೇ, ಸಂಸ್ಥೆಯ ಬಗ್ಗೆ, ಜನರಿಗೆ ಸಂದೇಶಗಳನ್ನು ಒದಗಿಸುವಂತಹ, ರಾಜಕೀಯ ವಿಷಯಗಳನ್ನು ಬಿತ್ತರಿಸುವಂತಹ ಜಾಹೀರಾತುಗಳನ್ನು ಈ ಸೇವೆಯ ಮೂಲಕ ಬಿತ್ತರಿಸಬಹುದಾಗಿದೆ ಎಂದು ಹೇಳಿದರು.
READ | ‘ಪ್ರಕಾಶ್’ ಟ್ರವೆಲ್ಸ್ ಮಾಲೀಕರ ರೋಚಕ ಬದುಕು, ಪ್ರತಿ ನವೋದ್ಯಮಿಗೂ ಮಾದರಿ, ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ಅಂಶಗಳಿವು
ದೇಶದ ಮೂರನೇ ದೊಡ್ಡ ಪಿಎಸ್ಯು ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಮೊದಲಿನಿಂದಲೂ ಹೊಸತನದ ಮಾಧ್ಯಮವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಏರೋಪ್ಲೇನ್ ಮೂಲಕ ವಿಶೇಷವಾಗಿ ಶುಭಾಷಯ ತಿಳಿಸುವ ನೂತನ ವಿಧಾನವನ್ನು ಬಳಸಿಕೊಳ್ಳುವ ಮೂಲಕ ಮತ್ತೊಮ್ಮೆ ವಿಶೇಷ ಮೆರೆಯಿತು.
ಆಕಾಶದಲ್ಲಿ ಜಾಹೀರಾತು ಪರಿಣಾಮಕಾರಿ
ವಿಮಾನದ ಮೂಲಕ ಆಕಾಶದಲ್ಲಿ ಜಾಹೀರಾತು ನೀಡುವುದು ಬಹಳ ಪರಿಣಾಮಕಾರಿ ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಜಾಹೀರಾತುಗಳನ್ನು ಏರೋಪ್ಲೇನ್ ನಿಂದ ಬಿತ್ತರಿಸುವುದು ಅಲ್ಲದೆ ವೈಯಕ್ತಿಕವಾದ ಸಂದೇಶ ಒಳಗೊಂಡ ಬ್ಯಾನರ್ ಗಳನ್ನು ಈ ಸೇವೆಯ ಮೂಲಕ ಪ್ರದರ್ಶಿಸಬಹುದಾಗಿದೆ. ನಮ್ಮ ದೇಶದ 73 ನೇ ಗಣರಾಜ್ಯೋತ್ಸವದ ಶುಭಾಷಯಗಳನ್ನು ತಿಳಿಸುವ ಅತ್ಯಂತ ಮಹತ್ವದ ದಿನದ ಅಭಿಯಾನಕ್ಕೆ ಏರಿಯಲ್ ಜಾಹೀರಾತು ಮಾಧ್ಯಮವನ್ನು ಕೆನರಾ ಬ್ಯಾಂಕ್ ಬಳಸಿಕೊಂಡಿದ್ದು ಬಹಳ ಸಂತಸದ ವಿಷಯವಾಗಿದೆ ಎಂದು ಆಕಾರ್ ಅಡ್ವರ್ಟೈಸಿಂಗ್ನ ಸಿಇಓ ಶರಣ್ ಮಖಿಜಾ ತಿಳಿಸಿದರು.
ಕಾರಾಗೃಹ ಬಂಧಿಗಳೊಡನೆ ವಿಡಿಯೋ ಕಾಲ್ಗೆ ಅವಕಾಶ, ಸೆಂಟ್ರಲ್ ಜೈಲಿನಿಂದ ವಿನೂತನ ಹೆಜ್ಜೆ