ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ಬೊಮ್ಮನಕಟ್ಟೆಯಲ್ಲಿ ಗುಂಪೊಂದು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ್ದು, ವಾಹನದ ಹಿಂಭಾಗದ ಗಾಜು ಪೀಸ್ ಪೀಸ್ ಆಗಿದೆ. ವಾಹನದಲ್ಲಿದ್ದ ಒಬ್ಬ ಪೊಲೀಸ್ ಸಿಬ್ಬಂದಿಯ ಮೇಲೆಯೂ ಹಲ್ಲೆ ಮಾಡಲಾಗಿದ್ದು, ಘಟನೆ ಸಂಬಂಧ ಒಟ್ಟು 9 ಮಂದಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಬೊಮ್ಮಕಟ್ಟೆ ನಿವಾಸಿಗಳಾದ ಪುನೀತ್, ವಿನೋದ್, ಸದ್ದಾಂ, ಅಕ್ಬರ್ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ.
READ | ಭಕ್ತರ ಆರಾಧ್ಯದೈವ ಕಲ್ಯಾಣೇಶ್ವರ ಮಲೆನಾಡಿನ ಪ್ರವಾಸಿ ತಾಣ, ಒಮ್ಮೆ ಭೇಟಿ ನೀಡಿ
ಕುಡಿದ ಅಮಲಿನಲ್ಲಿ ನಡೀತು ಗಲಾಟೆ
ಬೊಮ್ಮನಕಟ್ಟೆಯಲ್ಲಿ ಕುಡಿದ ಅಮಲಿನಲ್ಲಿ ಪರಸ್ಪರ ಜಗಳವಾಡುತ್ತಿದ್ದರು. ತಕ್ಷಣ ಸ್ಥಳೀಯರು 112ಗೆ ಕರೆ ಮಾಡಿ ಗಲಾಟೆ ನಡೆಯುತ್ತಿರುವ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಆಗ ಗಸ್ತಿನಲ್ಲಿದ್ದ ಪೊಲೀಸರು ಗಲಾಟೆ ನಡೆಯುತ್ತಿದ್ದ ಜಾಗಕ್ಕೆ ಬಂದಿದ್ದೇ ಗುಂಪು ಚದುರಿದೆ. ಅದರಲ್ಲಿ ಹಲವು ಪರಾರಿಯಾಗಿದ್ದಾರೆ. ಎಲ್ಲರಿಗೂ ಬುದ್ಧಿ ಹೇಳಿ ಪೊಲೀಸರು ಇನ್ನೇನು ಹೊರಡಬೇಕು. ಅಷ್ಟರಲ್ಲೇ ಗುಂಪಿನಲ್ಲಿದ್ದವರ ನಡುವೆ ಜಗಳವಾಗಿದೆ. ಆಗ ಕಲ್ಲು ತೂರಾಟ ಮಾಡಲಾರಂಭಿಸಿದ್ದಾರೆ. ಪೊಲೀಸ್ ವಾಹನದ ಮೇಲೆಯೂ ಕಲ್ಲುಗಳನ್ನು ತೂರಲಾಗಿದ್ದು, ಗಾಜು ಒಡೆದಿದೆ. ಗುಂಪು ನಿಯಂತ್ರಣಕ್ಕೆ ಬಾರದಕ್ಕೆ ಪಿಎಸ್.ಐ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿದೆ. ಭಾನುವಾರ ರಾತ್ರಿಯೇ 9 ಜನರನ್ನು ಬಂಧಿಸಿದೆ. ಸೋಮವಾರ ಬೆಳಗ್ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/05/20/car-glass-piece-piece-in-surrounding-gandhi-bazar-area/