ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ಅಡಿಕೆಯನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ತಾಲೂಕಿನ ಕೌರಿಹಕ್ಕಲು ಗ್ರಾಮದ ವೆಂಕಟೇಶ್ ತೋಟದಲ್ಲಿ ಒಣಗಿಸಲು ಇಟ್ಟಿದ್ದ ಒಂದೂವರೆ ಕ್ವಿಂಟಾಲ್ ಅಡಿಕೆಯನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಆಗುಂಬೆ ಠಾಣೆ ಪೊಲೀಸರು ಸುಧಾಕರ್ ಎಂಬುವವರನ್ನು ಬಂಧಿಸಿದ್ದಾರೆ.
READ | ಬೊಮ್ಮನಕಟ್ಟೆಯಲ್ಲಿ ಪೊಲೀಸ್ ವಾಹನದ ಮೇಲೆ ಕಲ್ಲು ತೋರಾಟ, ಕಾರಿನ ಹಿಂಭಾಗ ಪೀಸ್ ಪೀಸ್
ತೋಟದಲ್ಲಿ ಉದುರಿದ್ದ ಅಡಿಕೆಯನ್ನು ಒಣಗಿಸಲು ಹಾಕಲಾಗಿತ್ತು. ವೆಂಕಟೇಶ್ ಇಲ್ಲದ ವೇಳೆಯಲ್ಲಿ ಅಡಿಕೆಯನ್ನು ಕಳ್ಳತನ ಮಾಡಲಾಗಿತ್ತು. ತೀರ್ಥಹಳ್ಳಿ ಡಿವೈಎಸ್.ಪಿ ಶಾಂತವೀರ್ ಮಾರ್ಗದರ್ಶನದಲ್ಲಿ ಸಿಪಿಐ ಪ್ರವೀಣ್, ಆಗುಂಬೆ ಪಿಎಸ್.ಐ ಶಿವಕುಮಾರ್ ನೇತೃತ್ವದಲ್ಲಿ ತಂಡವು ಕಾರ್ಯಾಚರಣೆ ಮಾಡಿದೆ.