ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ತಾಲೂಕಿನ ಬಿಳಕಿ (Bilaki) ಗ್ರಾಮ ಪಂಚಾಯಿತಿ ಪಿಡಿಒ(Panchayat Development Officer)ವೊಬ್ಬರು ಮಂಗಳವಾರ ಸಂಜೆ ಎಸಿಬಿ (anti corruption bureau) ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಕುಮಾರನಹಳ್ಳಿ ನಿವಾಸಿ ಕೇಶವಮೂರ್ತಿ ಎಂಬುವವರು ಎಸಿಬಿ ಬಲೆಗೆ ಬಿದ್ದಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ.
ಜಮೀನುವೊಂದಕ್ಕೆ ಬ್ಯಾಂಕಿನಿಂದ ಸಾಲ ಪಡೆಯಲು ಎನ್.ಒ.ಸಿಗಾಗಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಂದ 1 ಲಕ್ಷ ರೂಪಾಯಿ ಲಂಚ(bribe) ಕ್ಕೆ ಬೇಡಿಕೆ ಇಟ್ಟಿದ್ದಾನೆ. ಮುಂಗಡವಾಗಿ 5000 ರೂಪಾಯಿ ಪಡೆದಿದ್ದು, ಇನ್ನೂ 70,000 ರೂಪಾಯಿಯನ್ನು ಕಚೇರಿಯಲ್ಲಿಯೇ ಪಡೆಯುತ್ತಿದ್ದಾಗ ಎಸಿಬಿ ಅವರು ಹಣ ಸಮೇತ ಈತನನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಎಸಿಬಿ ಡಿವೈಎಸ್ಪಿ ಲೋಕೇಶ್ ಮಾರ್ಗದರ್ಶನದಲ್ಲಿ ಸಿಪಿಐ ವಸಂತ್ ಕುಮಾರ್, ಪಿಎಸ್ಐ ಇಮ್ರಾನ್ ಬೇಗ್ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.