ಸುದ್ದಿ ಕಣಜ.ಕಾಂ | TALUK | CRIME NEWS
ಹೊಸನಗರ: ತಾಲೂಕಿನ ಕೊಡೂರು ಸಮೀಪ ಕಾರೊಂದು ಮಂಗಳವಾರ ಸಂಜೆ ಪಲ್ಟಿಯಾಗಿದ್ದು, ಚಾಲಕನ ಕೈಗೆ ಗಾಯವಾಗಿದೆ.
READ | ಸಕ್ರೆಬೈಲು ರಸ್ತೆಯಲ್ಲಿ ಭಾರಿ ಅನಾಹುತ, ಧಗ-ಧಗನೆ ಹೊತ್ತಿ ಉರಿದ ಕಾರು
ಕಾರಕ್ಕಿ ಕೋಟೆಕೆರೆಯ ರಾಜುಗೌಡ ಎಂಬುವವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಹೊಸನಗರಕ್ಕೆ ಆಗಮಿಸುವಾಗ ರಸ್ತೆಯ ಮೇಲೊಂದು ನಾಗರಹಾವು ಕಾಣಿಸಿದೆ. ಅದನ್ನು ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಷಾತ್ ಜೀವಹಾನಿ ಸಂಭವಿಸಿಲ್ಲ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.