ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಶಿವಮೊಗ್ಗ, ಭದ್ರಾವತಿಯಲ್ಲಿ ಸೋಂಕಿನ ಆರ್ಭಟ ಮುಂದುರಿದಿದೆ. ಶನಿವಾರ ಜಿಲ್ಲೆಯಲ್ಲಿ 609 ಮಂದಿಗೆ ಸೋಂಕು ದೃಢಪಟ್ಟಿದ್ದು, 499 ಜನ ಗುಣಮುಖರಾಗಿದ್ದಾರೆ. ಇವತ್ತು ಸಹ ಒಬ್ಬರು ಮೃತಪಟ್ಟಿದ್ದಾರೆ.
ಸೋಂಕಿನ ಲಕ್ಷಣವಿರುವ 1,971 ಜನರ ಮಾದರಿಗಳನ್ನು ಸಂಗ್ರಹಿಸಿದ್ದು, 2,484 ವರದಿಗಳು ನೆಗೆಟಿವ್ ಇವೆ. ಶಿಕ್ಷಣ ಸಂಸ್ಥೆಯಿಂದ 231 ಮಾದರಿ ಸಂಗ್ರಹಿಸಿದ್ದು 158 ಪಾಸಿಟಿವ್ ಬಂದಿವೆ.
ಕೋವಿಡ್ ಆಸ್ಪತ್ರೆಯಲ್ಲಿ 56 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಚ್.ಸಿಯಲ್ಲಿ 18, ಖಾಸಗಿ ಆಸ್ಪತ್ರೆಯಲ್ಲಿ 12, ಟ್ರಯಾಜ್ ನಲ್ಲಿ 13 ಹಾಗೂ ಮನೆ ಆರೈಕೆಯಲ್ಲಿ 2,405 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 192, ಭದ್ರಾವತಿಯಲ್ಲಿ 102, ತೀರ್ಥಹಳ್ಳಿಯಲ್ಲಿ 34, ಶಿಕಾರಿಪುರದಲ್ಲಿ 72, ಸಾಗರದಲ್ಲಿ 78, ಹೊಸನಗರದಲ್ಲಿ 75, ಸೊರಬದಲ್ಲಿ 48, ಬಾಹ್ಯ ಜಿಲ್ಲೆಯ 8 ಮಂದಿಗೆ ಸೋಂಕು ತಗುಲಿದೆ.