ಸುದ್ದಿ ಕಣಜ.ಕಾಂ | CITY | CITIZEN VOICE
ಶಿವಮೊಗ್ಗ: ಕಳೆದ ನಾಲ್ಕು ತಿಂಗಳುಗಳಿಂದ ಆರ್.ಎಂ.ಎಲ್.ನಗರದಲ್ಲಿ ಕಾಮಗಾರಿಗೋಸ್ಕರ ಗುಂಡಿಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ರಸ್ತೆಯ ಪಕ್ಕವೇ ಗುಂಡಿ ಇರುವುದರಿಂದ ಅಪಾಯಕ್ಕೆ ಆಹ್ವಾನಿಸುತ್ತಿದೆ.
ಶಾಲೆಯ ಮುಂಭಾಗವೇ ಬೃಹದಾಕಾರದ ಗುಂಡಿಗಳನ್ನು ತೆರೆಯಲಾಗಿದೆ. ಅದರಲ್ಲಿ ನೀರು ಸಹ ತುಂಬಿಕೊಂಡಿದ್ದು, ಅದನ್ನು ಮುಚ್ಚುವ ಅಥವಾ ಕಾಮಗಾರಿಯನ್ನು ಮುಂದುವರಿಸಿಲ್ಲ. ಕೂಡಲೇ ಮಹಾನಗರ ಪಾಲಿಕೆ ಅಧಿಕಾರಿಗಳು ಇದರೆಡೆಗೆ ಗಮನಹರಿಸಬೇಕು. ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಅನಾಹುತ ಸಂಭವಿಸುವ ಸಾಧ್ಯತೆ ಇದೆ.
– ಅಡ್ಡು ಸೈಯದ್, ಮಾಜಿ ಕಾರ್ಪೋರೇಟರ್, ಶಿವಮೊಗ್ಗ
ಸಿಟಿಜನ್ ವಾಯ್ಸ್ | ನಿಮ್ಮ ಭಾಗದ ಸಮಸ್ಯೆಗಳೇನೇ ಇದ್ದರೂ ನಮ್ಮ ವಾಟ್ಸಾಪ್ ಸಂಖ್ಯೆ +91 94831 30291 ಗೆ ಕಳುಹಿಸಿ. ಅದನ್ನು ಆಡಳಿತ ವರ್ಗಕ್ಕೆ ತಲುಪಿಸುವ ಜವಾಬ್ದಾರಿ ನಮ್ಮದು. -ಸುದ್ದಿ ಕಣಜ.ಕಾಂ