ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ನರಸೀಪುರದ ನಾಟಿ ಔಷಧ ನೀಡುವುದನ್ನು ಕಳೆದ ಎರಡು ವಾರಗಳಿಂದ ಸ್ಥಗಿತಗೊಳಿಸಲಾಗಿದೆ.
ಕೋವಿಡ್ ರೋಗ ಉಲ್ಬಣವಾಗುತ್ತಿರುವ ಹಿನ್ನೆಲೆ ನಾಟಿ ವೈದ್ಯರ ಕುಟುಂಬವು ಔಷಧ ವಿತರಣೆ ಕೇಂದ್ರದ ಬಾಗಿಲು ಹಾಕಿದ್ದಾರೆ.
ಮಲಂದೂರು ಗ್ರಾಮದ ಶಿವಗಂಗೆ ಕ್ಯಾಂಪಿನಲ್ಲಿ ಕಳೆದ ವರ್ಷದಿಂದ ಔಷಧವನ್ನು ವಿತರಣೆ ಮಾಡಲಾಗುತಿತ್ತು. ಆದರೆ, ಕೊರೊನಾ ಸೋಂಕು ಉಲ್ಬಣವಾಗಿದ್ದೇ ಔಷಧ ವಿತರಣೆ ಮಾಡುತ್ತಿಲ್ಲ.
READ | ಶಿವಮೊಗ್ಗ ಜಿಲ್ಲೆಯಲ್ಲಿ 5 ಶಾಲೆ, 4 ಕಾಲೇಜು ಸೀಲ್ ಡೌನ್, ಎಷ್ಟು ವಿದ್ಯಾರ್ಥಿಗಳು, ಶಿಕ್ಷಕರಿಗೆ ಪಾಸಿಟಿವ್?
ನರಸೀಪುರದಲ್ಲಿ ಯಾವ್ಯಾವ ಔಷಧ ವಿತರಣೆ?
ಕ್ಯಾನ್ಸರ್, ಕಿಡ್ನಿ, ಚರ್ಮ ರೋಗ, ಸಕ್ಕರೆ ಕಾಯಿಲೆ ಹೀಗೆ ನಾನಾ ಬಗೆಯ ರೋಗಗಳಿಗೆ ಔಷಧಗಳನ್ನು ಇಲ್ಲಿ ನೀಡಲಾಗುತ್ತದೆ. ವಿಶೇಷವೆಂದರೆ, ಈ ಔಷಧವನ್ನು ಪಡೆಯಲು ಕೇರಳಾ, ತಮಿಳುನಾಡು, ಮಹಾರಾಷ್ಟ್ರ, ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕದ ನಾನಾ ಭಾಗಗಳಿಂದ ಜನರು ಆಗಮಿಸುತ್ತಾರೆ.