ಸುದ್ದಿ ಕಣಜ.ಕಾಂ | KARNATAK | RAILWAY NEWS
ಶಿವಮೊಗ್ಗ: ನಿಟ್ಟೂರು-ಸಂಪಿಗೆ ಬಳಿ ನಡೆಯುತ್ತಿದ್ದ ರೈಲ್ವೆ ಹಳಿ ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ರದ್ದುಪಡಿಸಿದ್ದ ರೈಲ್ವೆಗಳ ಸಂಚಾರ ಪುನರಾರಂಭಕ್ಕೆ ಹಸಿರು ನಿಶಾನೆ ನೀಡಲಾಗಿದೆ.
ರೈಲು ಸಂಖ್ಯೆ 20651 ಕೆ.ಎಸ್.ಆರ್. ಬೆಂಗಳೂರು- ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನಿಂದ ಜನವರಿ 7, 10, 16 ಮತ್ತು 21ರಂದು ಸಂಚಾರ ರದ್ದುಪಡಿಸಲಾಗಿತ್ತು. ಆದರೆ, ಮರು ಸಂಚಾರಕ್ಕೆ ಆದೇಶಿಸಲಾಗಿದೆ.
ರೈಲು ಸಂಖ್ಯೆ 20652 ತಾಳಗುಪ್ಪ- ಕೆ.ಎಸ್.ಆರ್. ಬೆಂಗಳೂರು ರೈಲು ತಾಳಗುಪ್ಪದಿಂದ ಜನವರಿ 8, 11, 17 ಮತ್ತು 22ರಂದು ರದ್ದುಪಡಿಸಿತ್ತು. ಈ ದಿನಾಂಕಗಳಂದು ಸಹ ರೈಲು ಸಂಚರಿಸಲಿದೆ.
ರೈಲು ಸಂಖ್ಯೆ 07369 ಚಿಕ್ಕಮಗಳೂರು-ಯಶವಂತಪುರ ರೈಲನ್ನು ಸಹ ಜ.8, 11, 17 ಮತ್ತು 22ರಂದು ರದ್ದುಪಡಿಸಲಾಗಿತ್ತು. ಆದರೆ, ಯಥಾ ಪ್ರಕಾರ ರೈಲು ಸಂಚರಿಸಲಿದೆ.