ಸುದ್ದಿ ಕಣಜ.ಕಾಂ | DISTRICT | LATH MANGESHKAR
ಭದ್ರಾವತಿ: ಹೇ ಮೇರೆ ವತನ್ ಕೇ ಲೋಗೊ…. ಹಾಡಿನ ಮೂಲಕ ದೇಶ ಭಕ್ತಿಯ ಚಿಲುಮೆ ಹೊತ್ತಿಸಿದ ಲತಾ ಮಂಗೇಶ್ಕರ್ ಅವರು ನಿಧನರಾಗಿದ್ದು, ಲತಾ ದೀದಿಯ ಅಭಿಮಾನಿಗಳು ಕಣ್ಣೀರಾಗಿದ್ದಾರೆ.
ಭದ್ರಾವತಿಯ ಅಂಚೆ ಸಂಗ್ರಹಕಾರ ಗಣೇಶ್ ಭಟ್ ಅವರು ಲತಾ ಮಂಗೇಶ್ಕರ್ ಅವರ ಜನ್ಮದಿನ ಮತ್ತು ನಿಧನ ಹೊಂದಿದ 10 ರೂಪಾಯಿಯ ನೋಟುಗಳನ್ನು ಸಂಗ್ರಹಿಸಿದ್ದಾರೆ.
READ | ಪೊಲೀಸ್ ಇಲಾಖೆ ರೌಡಿಶೀಟರ್ ಜೊತೆ ಪ್ರಮುಖ ಮೀಟಿಂಗ್, ಹಲವರು ರೌಡಿ ಹಾಳೆಯಿಂದ ಔಟ್
ಗಣೇಶ್ ಅವರು ಬರೀ ನೋಟುಗಳನ್ನು ಮಾತ್ರವಲ್ಲದೇ ಅವರ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಸಹ ಇವರು ಸಂಗ್ರಹಿಸಿದ್ದಾರೆ. ದೀದಿಗೆ ಸಂದ ಪ್ರಶಸ್ತಿಗಳ ಬಗ್ಗೆಯೂ ವರದಿಗಳನ್ನು ಸಂಗ್ರಹಿಸಿದ್ದಾರೆ. ಸುಮಾರು ವರ್ಷಗಳಿಂದ ಈ ಹವ್ಯಾಸವನ್ನು ರೂಢಿಸಿಕೊಂಡಿರುವ ಗಣೇಶ್ ಅವರು ರಾಷ್ಟ್ರಪತಿ ಆದಿಯಾಗಿ ಎಲ್ಲರ ಜನ್ಮದಿನಾಂಕಗಳನ್ನು ಹೊಂದಿರುವ ನೋಟುಗಳು ಇವರ ಬಳಿ ಇವೆ.