ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ನಗರದ ಎಪಿಎಂಸಿ ಬಳಿ ಕರೆದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಚೀಲದಲ್ಲಿ ಕಟ್ಟಿ ಅಲ್ಲೇ ಹೂತು ಹಾಕಿದ ಪ್ರಕರಣ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 25,0000 ರೂಪಾಯಿ ದಂಡ ವಿಧಿಸಿ ನ್ಯಾಯಾಲಯವು ಗುರುವಾರ ಆದೇಶಿಸಿದೆ.
ಕಲ್ಲಹಳ್ಳಿ ಹುಡ್ಕೊ ನಿವಾಸಿ ಶ್ರೀಧರ್ (36) ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ. ಶಿವಮೊಗ್ಗದ ಗ್ಯಾರೇಜ್ ರೋಡ್ ನಿವಾಸಿ ಜಿ.ಮಂಜಪ್ಪ(43) ಎಂಬಾತ ಕೊಲೆಯಾದ ವ್ಯಕ್ತಿ.
READ | ಪದವಿ ಪಾಸ್ ಆದವರಿಗೆ IISc ನಲ್ಲಿ ತಾಂತ್ರಿಕ ಸಹಾಯಕ ಹುದ್ದೆ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ
ಪ್ರಕರಣದ ಹಿನ್ನೆಲೆ
ಶ್ರೀಧರ್ ಎಂಬಾತ ಮಂಜಪ್ಪನ ಬಳಿ 9 ಲಕ್ಷ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದು, ಹಿಂದಿರುಗಿ ನೀಡುವಂತೆ ಪದೇ ಪದೆ ಕೇಳಿದ್ದರಿಂದ 2014ರ ಫೆಬ್ರವರಿ 16ರಂದು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಪಿಎಂಸಿ ಬಳಿ ಆರೋಪಿ ಶ್ರೀಧರನು ಮಂಜಪ್ಪನನ್ನು ಕರೆಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಚೀಲದಲ್ಲಿ ಕಟ್ಟ ಅಲ್ಲೇ ಹೂತು ಹಾಕಿ ಸಾಕ್ಷಿ ನಾಶ ಮಾಡಿದ್ದ. ಈ ಬಗ್ಗೆ ಐಪಿಸಿ ಕಲಂ 302 201 ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದರು.
ಕೋಟೆ ವೃತ್ತ ಸಿಪಿಐ ಜಯರಾಜ್, ದೊಡ್ಡಪೇಟೆ ಠಾಣೆಯ ಸಿಪಿಐ ಎಸ್.ಎಂ. ಶಿವಕುಮಾರ್ ಅವರ ತಂಡಗಳು ಪ್ರಕರಣ ತನಿಖೆ ಕೈಗೊಂಡು 2014ರ ಫೆ.20ರಂದು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಜಿ.ಮಧು ವಾದ ಮಂಡಿಸಿದ್ದು, ಆರೋಪಿಯ ವಿರುದ್ಧ ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಾನು ಅವರು ತೀರ್ಪು ನೀಡಿದ್ದಾರೆ.
https://www.suddikanaja.com/2021/12/30/a-man-convicted-of-murdering-a-juice-shop-owner-in-shiralakoppa-has-been-sentenced-to-life-imprisonment-and-fined-%e2%82%b9-50000/