ಸುದ್ದಿ ಕಣಜ.ಕಾಂ | DISTRICT | HIJAB ROW
ಶಿವಮೊಗ್ಗ: ನಗರದದ ಬಿ.ಎಚ್.ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಯಲ್ಲಿ ಹಿಜಾಬ್ ಧರಿಸಿಯೇ ಸೋಮವಾರ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿತ್ತು.
ಸೋಮವಾರ ಬೆಳಗ್ಗೆ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ಆರಂಭಗೊಂಡಿದ್ದು, ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಾಲೆಗೆ ಆಗಮಿಸಿದ್ದರು. ಹೀಗಾಗಿ, ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಅವರ ಪೋಷಕರನ್ನು ಕರೆದು ಮಾತನಾಡಲಾಯಿತು. ಹಿಹಿಜಾಬ್ ತೆಗೆಯದೇ ಇದುದ್ದಕ್ಕೆ ಅವರನ್ನು ವಾಪಸ್ ಮನೆಗೆ ಕಳುಹಿಸಲಾಗಿದೆ.
VIDEO REPORT
READ | ಹಿಜಾಬ್, ಕೇಸರಿ ಶಾಲು ವಿವಾದ, ಶಿವಮೊಗ್ಗದಲ್ಲಿ ಖಾಕಿ ಖದರ್
ಬಿ.ಎಚ್.ರಸ್ತೆಯ ಕೆಪಿಎಸ್ ಶಾಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕರ್ನಾಟಕ ಸಂಘ ಪಕ್ಕದ ಪ್ರೌಢ ಶಾಲೆಯಲ್ಲೂ ಪರೀಕ್ಷೆ ನಡೆದಿದ್ದು, ಶೇ.50ರಷ್ಟು ವಿದ್ಯಾರ್ಥಿಗಳು ಬಂದಿಲ್ಲ.
ಪೊಲೀಸ್ ಬಿಗಿ ಬಂದೋಬಸ್ತ್, ಡಿಸಿ, ಎಸ್ಪಿ ಡಿಡಿಪಿಐ, ಭೇಟಿ
ಜಿಲ್ಲಾ ಮಟ್ಟದ ಅಧಿಕಾರಿಗಳು ಫೀಲ್ಡ್ ನಲ್ಲಿರಬೇಕು ಎಂದು ರಾಜ್ಯ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಅದರ ಅನ್ವಯ ಎಸ್.ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿಸಿ ಡಾ.ಆರ್.ಸೆಲ್ವಮಣಿ, ಡಿಡಿಪಿಐ ಎನ್.ಎಂ.ರಮೇಶ್ ಸೇರಿದಂತೆ ಕ್ಷೇತ್ರ ಶಿಕ್ಷಣ ಅಧಿಕಾರಿ ಇತರರು ಬೆಳಗ್ಗೆಯಿಂದಲೇ ಫೀಲ್ಡ್ ನಲ್ಲಿದ್ದಾರೆ.
ಪರೀಕ್ಷಾ ಕೇಂದ್ರಗಳ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಇದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಶಾಲೆಗಳಿಗೆ ಬರಲು ಬಿಡುತ್ತಿಲ್ಲ. ಶಾಂತಿಯುತವಾಗಿ ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.
https://www.suddikanaja.com/2022/02/09/hijab-saffron-shawl-controversy-commen-man-and-students-suffer-from-protest-at-shivamogga-and-fir-filed-by-victims/