ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ನಗರದ ದುರ್ಗಿಗುಡಿಯಲ್ಲಿ ದಂತ ವೈದ್ಯೆಯೊಬ್ಬರ ಮೇಲೆ ಹಲ್ಲೆ ಮಾಡಲಾಗಿದ್ದು, ಕಾರಿನ ಗಾಜನ್ನು ಒಡೆಯಲಾಗಿದೆ.
READ | ಸಿಎಂ ಇಬ್ರಾಹಿಂ ಸಹೋದರ ಮನೆಯಲ್ಲಿ ಕಳ್ಳತನ
ನಾಯಿ ಕಟ್ಟುವ ವಿಚಾರದಲ್ಲಿ ವಾಗ್ವಾದ ಬೆಳೆದು ಅದು ವಿಕೋಪಕ್ಕೆ ತಿರುಗಿದೆ. ವೈದ್ಯೆಯು ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಬಂದಿದ್ದು, ವ್ಯಕ್ತಿಯೊಬ್ಬರು ಅವಾಚ್ಯವಾಗಿ ಬೈಯ್ದಿದ್ದಾರೆ. ನಾಯಿಯನ್ನು ತಮ್ಮ ಮನೆಯ ಬಳಿ ಕಟ್ಟದಂತೆ ತಿಳಿಸಿದ್ದಾರೆ. ದೊಣ್ಣೆಯಿಂದ ಕಾರಿನ ಹಿಂಬದಿಯ ಗಾಜು ಒಡೆಯಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.