ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಅನುಮಾನಾಸ್ಪದವಾಗಿ ಓಡಾಡುತಿದ್ದ ವ್ಯಕ್ತಿಯೊಬ್ಬರನ್ನು ಗಸ್ತಿನಲ್ಲಿದ್ದ ಪೊಲೀಸರು ಬಂಧಿಸಿರುವ ಘಟನೆ ಬೆಂಕಿನಗರದಲ್ಲಿ ನಡೆದಿದೆ.
READ | ಶಿವಮೊಗ್ಗದಲ್ಲಿ ಸ್ಥಾಪನೆಯಾಗಲಿದೆ ಮಿನರಲ್ ವಾಟರ್ ಘಟಕ, ಅಗರಬತ್ತಿ ಫ್ಯಾಕ್ಟರಿಯಲ್ಲಿ ಎಷ್ಟು ಜನರಿಗೆ ಉದ್ಯೋಗ?
ಆಯನೂರು ಗೇಟ್ ಬಳಿಯ ಆಟೋ ಕಾಂಪ್ಲೆಕ್ಸ್ ನಿವಾಸಿ ಹರ್ಷದ್(23) ಬಂಧಿತ. ಈತ ಬೀಗ ಹಾಕಿದ ಮನೆಯ ಮುಂದೆ ಶುಕ್ರವಾರ ಬೆಳಗಿನ ಜಾವ ಓಡಾಡುತಿದ್ದ. ಪೊಲೀಸರು ವಿಚಾರಿಸಲು ಮುಂದಾದಾಗ ಓಡಿಹೋಗಲು ಯತ್ನಿಸಿದ್ದಾನೆ. ತಕ್ಷಣ ಪೊಲೀಸರು ಆತನ ಬೆನ್ನಟ್ಟಿ ಹಿಡಿದಿದ್ದಾರೆ. ಈತನನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ.