ಸುದ್ದಿ ಕಣಜ.ಕಾಂ | DISTRICT | RATION SHOPS
ಶಿವಮೊಗ್ಗ: ಸರಕಾರವು ಎಲ್ಲ್ಲ ಹಾಡಿಗಳು/ ತಾಂಡಗಳು, ಗೊಲ್ಲರಹಟ್ಟಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಆದೇಶಿಸಿದೆ. ಹೀಗಾಗಿ, ಜಿಲ್ಲೆಯ ಈ ಕೆಳಕಂಡ ತಾಲ್ಲೂಕುಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಹರು ಆಯಾ ತಾಲ್ಲೂಕು/ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
READ | ಶಿವಮೊಗ್ಗ ಮೇಲೆ ‘ನೇತ್ರಾ ವಿ3’ ಡ್ರೋನ್ ಕಣ್ಣು, ತೀವ್ರ ನಿಗಾಕ್ಕೆ ಒಟ್ಟು 6 ಡ್ರೋನ್, ಏನಿದರ ವಿಶೇಷ?
ಎಲ್ಲೆಲ್ಲಿ ತಾಂಡ ತೆರೆಯಲು ಅವಕಾಶ
- ಶಿವಮೊಗ್ಗ ತಾಲ್ಲೂಕಿನ ಸಿದ್ಲೀಪುರ ತಾಂಡ, ಬೆಳಲಕಟ್ಟೆ ತಾಂಡ, ಹೊಳೆಬೆನವಳ್ಳಿ ತಾಂಡ, ಹೊಸಮನೆ ತಾಂಡ, ಯಡವಾಲ ತಾಂಡ(ದೇವಬಾಳು ತಾಂಡ), ಗುಡ್ರುಕೊಪ್ಪ ತಾಂಡ(ಮಾಳೇನಹಳ್ಳಿ ತಾಂಡ), ಕೊನಗವಳ್ಳಿ ತಾಂಡ, ಬನ್ನೀಕೆರೆ ತಾಂಡ, ಬಿಕ್ಕೋನಹಳ್ಳಿ ತಾಂಡ, ನಾರಾಯಣಪರ ತಾಂಡ(ತಾಂಡ ಪ್ರದೇಶಗಳು) ಮತ್ತು ಚನ್ನಹಳ್ಳಿ, ರಟ್ಟೆಹಳ್ಳಿ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಲೋನಿ) ಇಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಹರು ಫೆ.14 ರಿಂದ ಮಾರ್ಚ್ 15 ರೊಳಗೆ ಅರ್ಜಿ ಸಲ್ಲಿಸಬಹುದು.
- ಭದ್ರಾವತಿ ತಾಲ್ಲೂಕಿನ ಬಿಳಕಿ ತಾಂಡ, ಇಂದಿರಾನಗರ ತಾಂಡ ಮತ್ತು ನಾಗತಿಬೆಳಗಲು ತಾಂಡ(ತಾಂಡ ಪ್ರದೇಶಗಳು) ಆದ್ರಿಹಳ್ಳಿ ಗ್ರಾಮ, ಹೊಳೆಗಂಗೂರು ಗ್ರಾಮ, ಬೊಮ್ಮನಕಟ್ಟೆ ಗ್ರಾಮ, ಬೋವಿ ಕಾಲೋನಿ ಗ್ರಾಮ, ವಡ್ಡರಹಟ್ಟಿ ಗ್ರಾಮ(ಪ.ಜಾತಿ/ಪ.ಪಂಗಡ ಕಾಲೋನಿ) ಇಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಫೆ.16 ರಿಂದ ಮಾ.17 ರೊಳೆಗೆ ಅರ್ಜಿ ಸಲ್ಲಿಸಬಹುದು.
- ಶಿಕಾರಿಪುರ ತಾಲ್ಲೂಕಿನ ಚುಂಚನಕೊಪ್ಪ ತಂಡ, ಎಂ.ಸಿ.ಆರ್.ಪಿ ಕಾಲೋನಿ ತಾಂಡ, ರಾಗಿಕೊಪ್ಪ ತಾಂಡ, ದೊಡ್ಡ ಜೋಗಿಹಳ್ಳಿ ತಾಂಡ, ಚಿಕ್ಕಮಾಗಡಿ ತಾಂಡ, ಮಲ್ಲಾಪುರ ತಾಂಡ, ಬೋಗಿಹಳ್ಳಿ ತಾಂಡ(ನಾಗೀಹಳ್ಳಿ ತಾಂಡ) ಗಾಂಧಿನಗರ ತಾಂಡ ಮತ್ತು ನಳ್ಳಿನಕೊಪ್ಪ ತಾಂಡ ಇಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಫೆ.17 ರಿಂದ ಮಾ.18 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ( Department of Food & Public Distribution) ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
https://www.suddikanaja.com/2021/04/28/new-ration-card-number-distribution/