ಸುದ್ದಿ ಕಣಜ.ಕಾಂ | CITY | COLLEGE LEAVE
ಶಿವಮೊಗ್ಗ: ಹಿಜಾಬ್- ಕೇಸರಿ ಶಾಲು ವಿಚಾರವಾಗಿ ಸಂಘರ್ಷ ತಾರಕಕ್ಕೇರಿದ್ದೇ ಮುಂಜಾಗರೂಕತೆಗಾಗಿ ಕಾಲೇಜು ಆಡಳಿತ ಮಂಡಳಿಯು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿಗೆ(ಎಟಿಎನ್ಸಿಸಿ) ಒಂದು ರಜೆ ನೀಡಲು ನಿರ್ಧರಿಸಿದೆ. ಹೀಗಾಗಿ, ಫೆಬ್ರವರಿ 8ರಂದು ತರಗತಿಗಳು ನಡೆಯುವುದಿಲ್ಲ. ಆದರೆ, ಸಿಬ್ಬಂದಿ, ಉಪನ್ಯಾಸಕರು ಕಾಲೇಜಿಗೆ ಬರಲು ಸೂಚನೆ ನೀಡಲಾಗಿದೆ.
ಹಿಜಾಬ್ ಧರಿಸುವ ವಿಚಾರವನ್ನು ಖಂಡಿಸಿ ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲು ಹಾಕಿಕೊಂಡು ಪ್ರತಿಭಟನೆ ಮಾಡಿದ್ದರು. ಕೆಲಹೊತ್ತು ಕಾಲೇಜು ಮಾತ್ರವಲ್ಲದೇ ಅಕ್ಕಪಕ್ಕವೂ ಬಿಗುವಿನ ವಾತಾವರಣವಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
READ | ಶಿವಮೊಗ್ಗ- ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ವೇಗ, ಕೇಂದ್ರ ಬಜೆಟ್ ನಲ್ಲಿ ಮೀಸಲಿಟ್ಟ ಅನುದಾನವೆಷ್ಟು ಗೊತ್ತಾ?
ಇಂದು ಹಿಜಾಬ್ ವಿಚಾರದ ತೀರ್ಪು
ಕಾಲೇಜು ತರಗತಿಯಲ್ಲಿ ಹಿಜಾಬ್ ಧರಿಸಿ ಬರುವ ವಿಚಾರ ಕುರಿತು ನ್ಯಾಯಾಲಯದ ಮೆಟ್ಟಿಲೇರಿದ್ದು, ಅದರ ತೀರ್ಪು ಮಂಗಳವಾರ ಹೊರಬೀಳುವ ಸಾಧ್ಯತೆ ಇದೆ. ಇದನ್ನೂ ದೃಷ್ಟಿಕೋನದಲ್ಲಿಟ್ಟುಕೊಂಡಿರುವ ಕಾಲೇಜು ಆಡಳಿತ ಮಂಡಳಿಯು ರಜೆ ನೀಡುವ ನಿರ್ಧಾರಕ್ಕೆ ಬಂದಿದದೆ.
ಹಿಜಾಬ್-ಕೇಸರಿ ಶಾಲು ಸಂಘರ್ಷ, ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ, ಇಂದು ಎಲ್ಲೆಲ್ಲಿ ಏನೇನಾಯ್ತು?