ಸುದ್ದಿ ಕಣಜ.ಕಾಂ | DISTRICT | HIJAB-SAFFRON SHAWL CONTROVERSY
ಶಿವಮೊಗ್ಗ: ನಗರದಲ್ಲಿ ಹಿಜಾಬ್ ವಿಚಾರವಾದ ಚರ್ಚೆ ತಾರಕಕ್ಕೇರಿದ್ದು, ಉಭಯ ಕೋಮಿನವರು ಶುಕ್ರವಾರ ಮಾಧ್ಯಮಗೋಷ್ಠಿ ಕರೆದು ಪರಸ್ಪರ ಆರೋಪ, ಪ್ರತ್ಯಾರೋಪಗಳನ್ನು ಮಾಡಿದ್ದಾರೆ. ಒಂದೆಡೆ ಬಿಜೆಪಿಯ ಮುಖಂಡ ಚನ್ನಬಸಪ್ಪ ಮತ್ತೊಂದೆಡೆ ಮುಸ್ಲಿಂ ಸಂಘಟನೆಯವರು ಮಾತನಾಡಿದ್ದಾರೆ. ಯಾರೇನು ಆರೋಪಿಸಿದರೆಂಬುವುದು ಕೆಳಗಿನಂತಿದೆ.
READ | ಹಿಜಾಬ್ ವಿಚಾರದಲ್ಲಿ ಮೌನ ಮುರಿದ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದೇನು?
ಶಿವಮೊಗ್ಗದ ಎಲ್ಲ ಮುಸ್ಲಿಂ ಸಂಘಟನೆ ಮತ್ತು ಜಮಾತ್ ಗಳ ಒಕ್ಕೂಟವಾದ ಜಾಯಿಂಟ್ ಆಕ್ಷನ್ ಕಮಿಟಿ ಆರೋಪಗಳೇನು?
- ಕಮಿಟಿಯ ಮೌಲಾನಾ ಶಾಹುಲ್ ಹಮೀದ್ ಮುಸ್ಲಿಯಾರ್ ಮಾತನಾಡಿದ್ದು, ‘ಹಿಜಾಬ್ ವಿಚಾರದಲ್ಲಿ ರಾಜ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಟೀಕಿಸಿದ್ದಾರೆ.
- ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೊರಡಿಸಿರುವ ಸುತೋಲೆ ಅಸಂವಿಧಾನಿಕವಾಗಿದೆ.
- ರಾಜ್ಯದಾದ್ಯಂತ ಉಂಟಾಗಿರುವ ಹಿಜಾಬ್ ವಿವಾದದಿಂದಾಗಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಾಂವಿಧಾನಿಕವಾಗಿ ಅವರಿಗೆ ಸಿಗಬೇಕಾದ ಶಿಕ್ಷಣ ಲಭ್ಯವಾಗುತ್ತಿಲ್ಲ.
- ಹಿಜಾಬ್ ಧಾರಣೆ ಮುಂಚಿನಿಂದಲೂ ಆಚರಣೆಯಲ್ಲಿದೆ. ಆದರೆ, ಉಡುಪಿಯ ಕಾಲೇಜುವೊಂದರಲ್ಲಿ ಉಂಟಾದ ವಿವಾದವನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ರಾಜಕೀಯ ಬಣ್ಣ ಬಳಿದಿರುವುದರಿಂದ ಇಷ್ಟೊಂದು ವ್ಯಾಪಿಸಿದೆ.
- ಶೇ.100 ಮುಸ್ಲಿಂ ಹೆಣ್ಣು ಮಕ್ಕಳು ಅಭ್ಯಾಸ ಮಾಡುವ ಶಾಲೆಗಳಲ್ಲಿಯೂ ಹಿಜಾಬ್ ಗೆ ಅವಕಾಶ ನೀಡದಿರುವುದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯೂ ಹೊರಡಿಸಿರುವ ಸುತ್ತೋಲೆ ಹಾಸ್ಯಾಸ್ಪದವಾಗಿದೆ
ವಕೀಲ ನಯಾಜ್ ಅಹಮದ್ ಹೇಳಿದ್ದೇನು?
- ನ್ಯಾಯಾಲಯದ ತೀರ್ಪು ಸಮವಸ್ತ್ರ ಕಡ್ಡಾಯವಿಲ್ಲದ ಪದವಿ ಕಾಲೇಜುಗಳಿಗೆ ಇದು ಅನ್ವಯಿಸುವುದಿಲ್ಲ. ಆದರೆ ಖಾಸಗಿ ಪದವಿ ಕಾಲೇಜುಗಳಲ್ಲಿ ಮಕ್ಕಳಿಗೆ ಹಿಜಾಬ್ ಧರಿಸಲು ಬಿಡುತ್ತಿಲ್ಲ. ಪೆÇಲೀಸರು ಮತ್ತು ಆಡಳಿತ ಮಂಡಳಿಯವರು ಹಿಜಾಬ್ ತೆಗೆಯಲು ಹೇಳುತ್ತಿರುವುದು ಸರಿಯಲ್ಲ.
- ನ್ಯಾಯಾಲಯದ ಮಧ್ಯಂತರ ಆದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಹಲವಾರು ಪದವಿ ಶಿಕ್ಷಣ ಕಾಲೇಜುಗಳಲ್ಲಿ ಮತ್ತು ಪ್ರೌಢ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ನೀಡುತ್ತಿಲ್ಲ. ತೀರ್ಪಿನಲ್ಲಿ ಪಿಯು ಕಾಲೇಜು, ಪ್ರೌಢ ಶಾಲೆ, ಖಾಸಗಿ ಶಾಲೆ, ಅಧ್ಯಾಪಕರ ಬಗ್ಗೆ ಯಾವುದೇ ರೀತಿಯ ಉಲ್ಲೇಖವಿಲ್ಲ. ಇದು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಿ.ಡಿ.ಸಿಗಳು ಸಮವಸ್ತ್ರ ನಿರ್ಧರಿಸಿದ ಕಾಲೇಜುಗಳಿಗೆ ಮಾತ್ರ ಅನ್ವಯವಾಗುತ್ತದೆ.
- ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಿಸಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು.
- ಮಾಧ್ಯಮಗೋಷ್ಠಿಯಲ್ಲಿ ಮೌಲಾನಾ ಮುಫ್ತಿ, ಮುಹಮ್ಮದ್ ಆಖಿಲ್ ರಝಾ, ಮೌಲಾನಾ ಮುಫ್ತಿ ಮುಜೀಬುರ್ಹ್ಮಾನ್, ಲಿಯಾಖತ್ ಖಾನ್, ಶಹರಾಜ್ ಮುಜಾಹಿದ್ ಸಿಬಿ, ಆರೀಫ್ ಉಪಸ್ಥಿತರಿದ್ದರು.
ಬಿಜೆಪಿ ಮುಖಂಡ ಎಸ್.ಎನ್.ಚನ್ನಬಸಪ್ಪ ಮಾಡುವ ಆರೋಪಗಳೇನು?
- ಸಂವಿಧಾನ ಮತ್ತು ನ್ಯಾಯಾಲಯದ ಆದೇಶಕ್ಕೆ ಗೌರವ ನೀಡದವರು ದೇಶದಲ್ಲಿ ಇರಲು ಲಾಯಕ್ ಇಲ್ಲ. ದೇಶ ದ್ರೋಹಿಗಳಿಗೆ ಜಾಗವಿಲ್ಲ. ಬೇಕಿದ್ದರೆ ದೇಶವನ್ನು ತೊರೆಯಿರಿ.
- ಹಿಜಾಬ್ ಗೆ ನಮ್ಮ ವಿರೋಧವಿಲ್ಲ. ಹಿಜಾಬ್ ಧರಿಸುವ ಹಕ್ಕು ಮುಸ್ಲಿಂ ಮಹಿಳೆಯರಿಗೆ ಇದೆ. ಆದg, ಶಾಲೆ ಕಾಲೇಜುಗಳಲ್ಲಿ ಧರಿಸಿ ತರಗತಿಗೆ ಹಾಜರಾಗುವಂತಿಲ್ಲ.
- ಕಾಂಗ್ರೆಸ್ ಅವರಿಂದ ದೇಶಭಕ್ತಿಯ ಪಾಠವನ್ನು ಬಿಜೆಪಿಯವರು ಕಲಿಯುವ ಅಗತ್ಯವಿಲ್ಲ. ಕಾಂಗ್ರೆಸ್ ಯುವ ಕಾರ್ಯಕರ್ತರು ಬಿಜೆಪಿ ಕಚೇರಿಗೆ ನುಗ್ಗಿ ಪ್ರತಿಭಟನೆ ಮಾಡಿದ್ದಕ್ಕೆ ಪೂರ್ಣ ಸ್ವಾಗತವಿದೆ. ಇದರಿಂದ ಅವರು ಮಾಡಿದ ಪಾಪಗಳನ್ನು ತೊಳೆದುಕೊಂಡಿದ್ದಾರೆ.
- ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಈ ಹಿಂದೆ ಸಮಾರಂಭವೊಂದರಲ್ಲಿ ಕೇಸರಿ ಪೇಠಾವನ್ನು ಕಿತ್ತೊಗೆದಿದ್ದರು. ಇದು ಸರಿಯೇ, ಶಿವಮೊಗ್ಗಕ್ಕೆ ಸಿದ್ದರಾಮಯ್ಯ ಬಂದರೆ ಭಗವಾಧ್ವಜ ಪ್ರದರ್ಶಿಸಲಾಗುವುದು
ಬಿಜೆಪಿ ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಜಗದೀಶ್, ಸೂಡಾ ಅಧ್ಯಕ್ಷ ನಾಗರಾಜ್, ಉಪಮೇಯರ್ ಶಂಕರ್ ಗನ್ನಿ, ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಇ.ವಿಶ್ವಾಸ್, ಮುಖಂಡರಾದ ಬಳ್ಳೆಕೆರೆ ಸಂತೋಷ್, ಕೆ.ವಿ.ಅಣ್ಣಪ್ಪ ಉಪಸ್ಥಿತರಿದ್ದರು.