ಸುದ್ದಿ ಕಣಜ.ಕಾಂ | DISTRICT | CURFEW
ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ಹಿಂಸೆಯ ಸ್ವರೂಪ ಪಡೆದಿದ್ದೇ ನಗರದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ನಗರದ ವ್ಯಾಪ್ತಿಗೆ ಒಳಪಡುವ ಎಲ್ಲ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಎಸ್.ಪಿ. 3, ಹೆಚ್ಚುವರಿ ಎಸ್.ಪಿ 1, ಡಿವೈಎಸ್ಪಿ 12, ಪಿಐ 39, ಪಿಎಸ್.ಐ 54, ಎಎಸ್.ಐ 48, ಎಚ್.ಸಿ/ ಪಿಸಿ 819, 20 ಕೆ.ಎಸ್.ಆರ್.ಪಿ ತುಕಡಿಗಳು, 10 ಡಿಎಆರ್ ತುಕಡಿಗಳು ಮತ್ತು 1 ಆರ್.ಎ.ಎಫ್ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.