ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ಸಾಲ ತೀರಿಸಲಾಗದೇ ಮನನೊಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
READ | ಸಿಗಂದೂರು ದರ್ಶನ ಪಡೆದು ತೆರಳುವಾಗ ಅಪಘಾತ
ತ್ಯಾಜುವಳ್ಳಿ ಗ್ರಾಮದ ವೀರೇಶಪ್ಪ(45) ಮೃತರು. ಇವರು ಮೆಕ್ಕೆಜೋಳ ಬಿತ್ತನೆಗಾಗಿ ವಿವಿಧೆಡೆಯಿಂದ ಒಟ್ಟು 66 ಸಾವಿರ ರೂಪಾಯಿ ಹಾಗೂ ಕೈಗಡ 35 ಸಾವಿರ ರೂಪಾಯಿ ಪಡೆದಿದ್ದಾರೆ. ಆದರೆ, ಮೆಕ್ಕೆಜೋಳ ನಿರೀಕ್ಷಿತ ಮಟ್ಟದಲ್ಲಿ ಬೆಳೆಯದೇ ನಷ್ಟ ಅನುಭವಿಸಿದ್ದಾರೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ವಿಷ ಸೇವನೆ ಮಾಡಿದದ್ದಾರೆ.
ವಿಷ ಸೇವಿಸಿ ಒದ್ದಾಡುತ್ತಿದ್ದ ವೀರೇಶಪ್ಪ ಅವರನ್ನು ತಕ್ಷಣ ಹಾರನಹಳ್ಳಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮೃತಪಟ್ಟಿದ್ದಾರೆ.