ಸುದ್ದಿ ಕಣಜ.ಕಾಂ | CITY | SECTION 144
ಶಿವಮೊಗ್ಗ: ಮಂಗಳವಾರ ರಣಾಂಗಣವಾಗಿದ್ದ ಶಿವಮೊಗ್ಗ ನಗರ ಇಂದು ಸ್ತಬ್ದವಾಗಿದೆ.
ನಗರದಾದ್ಯಂತ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ. ನಗರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (section 144) ಜಾರಿಗೆ ತಂದಿದ್ದು, ಎಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಂತೆ ಖಡಕ್ ಕ್ರಮಕೈಗೊಳ್ಳಲಾಗಿದೆ.
ಹಿಂಸಾಚಾರದ ಬಳಿಕ ಹೇಗಿದೆ ಶಿವಮೊಗ್ಗ ಸ್ಥಿತಿ, ವಿಡಿಯೋ ವೀಕ್ಷಿಸಿ
READ | ಶಿವಮೊಗ್ಗದಲ್ಲಿ ಹಿಜಾಬ್ ವಿವಾದ, ಗಾರೆಯವನ ಮೇಲೂ ಅಟ್ಯಾಕ್, ಪೊಲೀಸ್ ವಾಹನ ಪೀಸ್ ಪೀಸ್, ಇನ್ನೇನೆನಾಯ್ತು?
ಎಲ್ಲೆಲ್ಲಿ ಪೊಲೀಸರ ನಿಯೋಜನೆ
ಲಷ್ಕರ್ ಮೊಹಲ್ಲಾ, ಟ್ಯಾಂಕ್ ಮೊಹಲ್ಲಾ, ಅಮೀರ್ ಅಹ್ಮದ್ ಸರ್ಕಲ್, ಓಟಿ ರಸ್ತೆ, ಗಾಂಧಿ ಬಜಾರ್ ಪ್ರದೇಶ, ಬಿ.ಎಚ್.ರಸ್ತೆ, ಶಿವಪ್ಪ ನಾಯಕ ವೃತ್ತ, ಬಾಪೂಜಿನಗರ ಪ್ರಥಮ ದರ್ಜೆ ಕಾಲೇಜು, ಬಾಪೂಜಿನಗರ, ಸೈನ್ಸ್ ಮೈದಾನ, ಕೋಟೆ ಪ್ರದೇಶ, ಸಹ್ಯಾದ್ರಿ ಕಾಲೇಜು, ಕೋರ್ಟ್ ಸರ್ಕಲ್, ಎಟಿಎನ್.ಸಿಸಿ, ಡಿವಿಎಸ್ ಕಾಲೇಜು ಸೇರಿದಂತೆ ಕಾಲೇಜುಗಳ ಅಕ್ಕಪಕ್ಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕೆಎಸ್.ಆರ್.ಪಿ. ವಾಹನವನ್ನು ನಿಲ್ಲಿಸಿದ್ದು, ಜನರು ಗುಂಪು ಸೇರುವುದರ ಮೇಲೆ ನಿಗಾ ಇಡಲಾಗಿದೆ. ಶಿವಮೊಗ್ಗ ನಗರ ಮಾತ್ರವಲ್ಲದೇ ಜಿಲ್ಲೆಯ ವಿವಿಧೆಡೆಯಿಂದಲೂ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಅಂಗಡಿ ಮುಂಗಟ್ಟು ಬಂದ್, ಸಂಚಾರ ಹೇರಳ
ಗಾಂಧಿ ಬಜಾರ್ ನಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿತ್ತು. ಆದರೆ, ಪೊಲೀಸರು ಬಂದು ಬೆಳಗ್ಗೆ ಅವುಗಳನ್ನು ಬಂದ್ ಮಾಡಿಸಿದರು. ಅದರಲ್ಲೂ ಯುವಪೀಳಿಗೆ ಹೆಚ್ಚಾಗಿ ಸೇರುವ ಪಾನ್ ಶಾಪ್, ಹೋಟೆಲ್, ಮೊಬೈಲ್ ಅಂಗಡಿ ಇತ್ಯಾದಿಗಳನ್ನು ಬಂದ್ ಮಾಡಿಸಲಾಯಿತು.
https://www.suddikanaja.com/2022/02/08/hijab-saffron-controversy-lathi-charge-in-shivamogga/