ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ಕಾಮತ್ ಪೆಟ್ರೋಲ್ ಬಂಕ್ ಬಳಿ ಹಿಂದೂಪರ ಸಂಘಟನೆ ಕಾರ್ಯಕರ್ತನೊಬ್ಬನನ್ನು ಭಾನುವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.
ಮೃತನನ್ನು ಸೀಗೆಹಟ್ಟಿ ನಿವಾಸಿ ಹರ್ಷ(26) ಎಂದು ಗುರುತಿಸಲಾಗಿದೆ. ಮಾರಕಾಸ್ತ್ರಗಳಿಂದ ಗುಂಪೊಂದು ದಾಳಿ ಮಾಡಿದೆ.
READ | ಶಿವಮೊಗ್ಗದಲ್ಲಿ ಜೋಡಿ ಕೊಲೆ, ಇಬ್ಬರ ಬಂಧಿಸಿದ ಪೊಲೀಸ್
ಸ್ಥಳದಲ್ಲಿ ಖಾಕಿ ಕಾವಲು
ಪೊಲೀಸ್ ಮೂಲಗಳು ಪ್ರಕಾರ, ರಾತ್ರಿ 9ರಿಂದ 9.30 ಸುಮಾರಿಗೆ ಹರ್ಷನ ಮೇಲೆ ಹಲ್ಲೆ ಮಾಡಲಾಗಿದೆ. ಇದಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ಹಾಗೂ ಯಾರು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಮುಂಜಾಗೃತೆ ಉದ್ದೇಶದಿಂದ ಘಟನೆ ನಡೆದಿರುವ ಹಾಗೂ ಮೆಗ್ಗಾನ್ ಆಸ್ಪತ್ರೆ ಬಳಿ ಪೊಲೀಸರ ಗಸ್ತು ಹಾಕಲಾಗಿದೆ.