ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ಗಾಡಿಕೊಪ್ಪದಲ್ಲಿರುವ ಶ್ರೀದೇವಿ ಕಂಪನಿಯ ಗ್ಯಾರೇಜ್ ವೊಂದರಲ್ಲಿ ಕೆಎಸ್.ಆರ್.ಪಿ ವಾಹನವೊಂದಕ್ಕೆ ಬೆಂಕಿ ತಾಕಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
READ | ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದವರು ಅರೆಸ್ಟ್
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮಾಚೇನಹಳ್ಳಿ ಕೆಎಸ್.ಆರ್.ಪಿ ಎಂಟನೇ ಪಡೆಯ ವಾಹನಕ್ಕೆ ಬೆಂಕಿ ತಗುಲಿದೆ. ರಿಪೇರಿ ಮಾಡುವುದಕ್ಕಾಗಿ ಜನವರಿ 5ರಂದು ವಾಹನವನ್ನು ಗ್ಯಾರೇಜ್ ಗೆ ಬಿಡಲಾಗಿದೆ. ಆದರೆ, ಮಧ್ಯಾಹ್ನ ಶಾರ್ಟ್ ಸಕ್ರ್ಯೂಟ್ ಆಗಿ ವಾಹನ ಸುಟ್ಟು ಕರಕಲಾಗಿದೆ. ವಾಹನದ ಒಳಭಾಗಗಳು ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.