ಸುದ್ದಿ ಕಣಜ.ಕಾಂ | DISTRICT | ROUTE CHANGE
ಶಿವಮೊಗ್ಗ: ಫೆಬ್ರವರಿ 19 ಮತ್ತು 20ರಂದು ರಾಜ್ಯ ಹೆದ್ದಾರಿ 57ರಲ್ಲಿ ಮರು ಡಾಂಬಾರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 19ರ ರಾತ್ರಿ 9ರಿಂದ ವಾಹನಗಳ ಸಂಚಾರ ನಿರ್ಬಂಧಿಸಿದ್ದು, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಶುಕ್ರವಾರ ಆದೇಶಿಸಿದ್ದಾರೆ.
ಶಿವಮೊಗ್ಗ ಮೂಲಕವೇ ಹಾದು ಹೋಗುವ ಬಾಗಲಕೋಟೆ-ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಡಾಂಬರೀಕರಣ ಕಾಮಗಾರಿ ನಡೆಯಲಿದೆ. ತುಂಗಾ ಹೊಸ ಮತ್ತು ಹಳೆಯ ಸೇತುವೆಗಳು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಸೇರಿಸುವ ರಸ್ತೆಯಾಗಿದ್ದು, ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಹಾಗೂ ಹಳೆಯ ತುಂಗಾ ಸೇತುವೆಗೆ ಪಿಡಬ್ಲ್ಯುಡಿ ವಿಶೇಷ ವಿಭಾಗದ ಇಇ ಅವರು 2.70 ಮೀಟರ್ ಗೆ ಹೈಟ್ ಬ್ಯಾರಿಯರ್ ಗಳನ್ನು ಅಳವಡಿಸಿದ್ದು, ಸೇತುವೆಯ ಮೇಲೆ ಆಂಬ್ಯುಲೆನ್ಸ್ ವಾಹನಗಳು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರಾತ್ರಿ ಸಮಯದಲ್ಲಿ ಮರು ಡಾಂಬರೀಕರಣ ಕಾಮಗಾರಿಯನ್ನು ಮಾಡಿದರೆ ಸಂಚಾರಕ್ಕೆ ಉತ್ತಮವೆಂದು ತಿಳಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
- ಶಿವಮೊಗ್ಗ ನಗರಕ್ಕೆ ಪ್ರವೇಶಿಸುವ ಲಘು ವಾಹನಗಳು ಹಳೆಯ ಸೇತುವೆ ಮೇಲೆ ಸಂಚರಿಸುವುದು
- ಶಿವಮೊಗ್ಗ ನಗರಕ್ಕೆ ಪ್ರವೇಶಿಸುವ ಭಾರಿ ವಾಹನಗಳು ವಿದ್ಯಾನಗರ-ಎಂಆರ್ಎಸ್ ಸರ್ಕಲ್ ಮುಖಾಂತರ ಸಂಚರಿಸುವುದು
- ಹೊನ್ನಾಳಿಯಿಂದ ಶಿವಮೊಗ್ಗ ನಗರಕ್ಕೆ ಪ್ರವೇಶಿಸುವ ಎಲ್ಲ ಬಗೆಯ ಹಾಗೂ ಭಾರೀ ವಾಹನಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಕೆಇಬಿ ಸರ್ಕಲ್, ರೈಲ್ವೆ ಸ್ಟೇಷನ್ ರಸ್ತೆ, ಉಷಾ ನರ್ಸಿಂಗ್ ಹೋಮ್, 100 ಅಡಿ ರಸ್ತೆ ಮುಖಾಂತರ ಸಂಚರಿಸುವುದು
- ಶಿವಮೊಗ್ಗ ನಗರದಿಂದ ಹೊರ ಹೋಗುವ ಎಲ್ಲ ಬಗೆಯ ಹಾಗೂ ಭಾರಿ ವಾಹನಗಳು ಅಶೋಕ ಸರ್ಕಲ್, ಎನ್.ಟಿ.ರಸ್ತೆ, ಸಂದೇಶ ಮೋಟರ್ಸ್ ಸರ್ಕಲ್, ಬೈಪಾಸ್ ರಸ್ತೆಯ ಮೂಲಕ ಸಂಚರಿಸುವುದು
ಸವಳಂಗ ರಸ್ತೆ ಓವರ್ ಬ್ರಿಜ್ ಕಾಮಗಾರಿ, ನಾಳೆಯಿಂದ ಪರ್ಯಾಯ ಮಾರ್ಗದ ವ್ಯವಸ್ಥೆ, ಇಲ್ಲಿದೆ ಪೂರ್ಣ ಮಾಹಿತಿ