ಸುದ್ದಿ ಕಣಜ.ಕಾಂ | KARNATAKA | SCULPTURE
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಜಡೆ ಹೋಬಳಿ ತಲಗುಂದ ಗ್ರಾಮದಲ್ಲಿ ಕದಂಬರ ಅರಸ ರವಿವರ್ಮನ ಕಾಲದ ಶಾಸನ ಮತ್ತು ಸಿಂಹ ಶಿಲ್ಪ ಪತ್ತೆಯಾಗಿದೆ.
READ | ‘ಅಡುಗೂಳಜ್ಜಿ’ ರಾಜರ ಕಾಲದ ಸ್ಪೈ ಎಂದರೂ ತಪ್ಪಾಗದು, ಈ ಪದ ಹುಟ್ಟಿದ್ದು ಹೇಗೆ, ನೈಜವಾಗಿ ಇವರಿದ್ದರಾ?
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಆರ್. ಶೇಜೇಶ್ವರ್, ಚುರ್ಚಿಗುಂಡಿ ಮಂಜಪ್ಪ ಇವರು ಕ್ಷೇತ್ರ ಕಾರ್ಯ ಕೈಗೊಂಡಾಗ ತಲಗುಂದ ಗ್ರಾಮದ ರಾಮೇಶ್ವರ ದೇವಾಲಯದ ಹತ್ತಿರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಸನ ಪತ್ತೆಯಾಗಿದೆ. ಕರ್ನಾಟಕವನ್ನು ಆಳಿದ ರಾಜ್ಯದ ಪ್ರಥಮ ಕನ್ನಡ ಮನೆತನವಾದ ಕದಂಬ ಅರಸ ರವಿವರ್ಮನ ಕಾಲದ ಶಾಸನ ಇದಾಗಿದೆ.
ಶಾಸನದ ಬಗ್ಗೆ ಮಾಹಿತಿ
ಕಲ್ಲಿನ ಮೇಲಿರುವ ಶಾಸನವು 143 ಸೆಂ.ಮೀ ಉದ್ದ ಹಾಗೂ 49 ಸೆಂ.ಮೀ ಆಗಲವಿದೆ. ಬ್ರಾಹ್ಮಿ ಲಿಪಿ ಹಾಗೂ ಸಂಸ್ಕøತ ಭಾಷೆಯ ಏಳು ಸಾಲಿನಿಂದ ಕೂಡಿದ್ದು, ಶಾಸನವು ಅಲ್ಲಲ್ಲಿ ಸ್ವಲ್ಪ ತೃಟಿತವಾಗಿದೆ.
ಶಾಸನದ ಸಾರಾಂಶ | ಬನವಾಸಿ ಕದಂಬರ ರವಿವರ್ಮನಿಗೆ ಸಂಬಂಧಿಸಿದಂತೆ ಇದುವರೆಗೂ 10 ಶಾಸನಗಳು ಮಾತ್ರ ಕಂಡುಬಂದಿವೆ. ಇದೂ ಸೇರಿ ಸಂಖ್ಯೆಯು 11ಕ್ಕೆ ಏರಿಕೆಯಾಗಿದೆ.
READ | ಚಲಿಸುತ್ತಿದ್ದ ಬಸ್ ಹೋದ ವಿದ್ಯಾರ್ಥಿ ಕೆಳಗೆ ಬಿದ್ದ ವಿಡಿಯೋ ವೈರಲ್
ರವಿವರ್ಮನು ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಕ್ರಿ.ಶ. 485ರಿಂದ ಕ್ರಿ.ಶ. 519ರ ವರೆಗೆ ಸುಮಾರು 34 ವರ್ಷಗಳು ಆಳ್ವಿಕೆ ಮಾಡಿದ್ದು, ಈ ಶಾಸನದಲ್ಲಿ ಹಾರಿತಿಯ ಪುತ್ರರಾದ ಮಾನವ್ಯಸ ಗೋತ್ರಕ್ಕೆ ಸೇರಿದ ಚರ್ಚೆಯಲ್ಲಿ ಪ್ರಸಿದ್ಧರಾದ ಕದಂಬ ವಂಶದ ಮೃಗೇಶವರ್ಮನ ಮಗನಾದ ಮಂಡಲದ ಅಧಿಪತಿಯಾದ ರವಿವರ್ಮನು ದೇವತೆಗಳಿಂದ ಪೂಜಿಸಲ್ಪಟ್ಟು ಪ್ರಸಿದ್ದನಾಗಿದ್ದು ಮುಚ್ಚುಂಡಿಯ ಗ್ರಾಮದಲ್ಲಿ ಆರನೇ ಒಂದು ಭಾಗನ್ನು ದಾನ ನೀಡಿದ್ದಾರೆ. ದಾನ ನೀಡಿದ ಗ್ರಾಮವು ಶಿಕಾರಿಪುರ ತಾಲ್ಲೂಕಿನ ಅಗ್ರಹಾರ ಮುಚ್ಚಡಿ ಅಥವಾ ಮಾಯಿತಮ್ಮನ ಮುಚ್ಚಡಿ ಆಗಿರಬಹುದಾಗಿದೆ. ಈ ಶಾಸನವು ಕ್ರಿ.ಶ. 5-6ನೇ ಶತಮಾನದ್ದಾಗಿದೆ. ಇದರ ಹತ್ತಿರ ಕದಂಬ ಅರಸರ ಕಾಲದ ಸಿಂಹ ಶಿಲ್ಪವು ಸಹ ದೊರೆತಿದೆ. ಇದರ ಅಕ್ಕಪಕ್ಕದಲ್ಲಿಯೇ ಇತರೆ ಶಾಸನಗಳು, ಶಿವಲಿಂಗಗಳು, ಸಪ್ತಮಾತೃಕೆ ಶಿಲ್ಪಗಳು ಲಭಿಸಿವೆ.
ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಗ್ರಾಮಸ್ಥರಾದ ಮೇಘರಾಜ್, ಮಲ್ಲಿಕಾರ್ಜುನ್, ಶಾಸನವನ್ನು ಓದಿಕೊಟ್ಟ ಡಾ.ಜಗದೀಶ್, ನಾಗರಾಜರಾವ್ ಮೈಸೂರು ಇವರಿಗೆ ಡಾ. ಆರ್. ಶೇಜೇಶ್ವರ ಧನ್ಯವಾದಗಳನ್ನು ತಿಳಿಸಿದ್ದಾರೆ.
ರಾಷ್ಟ್ರಕೂಟರ ಅವಧಿಯ ಐತಿಹಾಸಿಕ ಕುರುಹುಗಳು ಪತ್ತೆ, ಬೆಳಕಿಗೆ ಬಂದ ವಿಶಿಷ್ಟ ಅಂಶಗಳು