ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ಇನ್ನೂ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ ಆರಕ್ಕೇರಿಕೆಯಾಗಿದೆ.
READ | ಭಜರಂಗ ದಳ ಕಾರ್ಯಕರ್ತ ಹರ್ಷ ಕೊಲೆ, ಬಂಧಿತರ ಹೆಸರು ರಿಲೀಸ್
ಕ್ಲಾರ್ಕ್ ಪೇಟೆ ನಿವಾಸಿಗಳಾದ ರಿಹಾನ್ ಶರೀಫ್ (22), ಆಸೀಫ್ ಉಲ್ಲಾಖಾನ್ (22), ಟ್ಯಾಂಕ್ ಮೊಹಲ್ಲಾದ ಅಬ್ದುಲ್ ಅಫಾನ್ (21), ಮುರಾದ್ ನಗರದ ನಿಹಾನ್ (21) ಬಂಧಿತರು. ಘಟನೆ ನಡೆದ ಬೆನ್ನಲ್ಲೇ ಬುದ್ಧನಗರದ ಖಾಸಿಫ್ (30) ಹಾಗೂ ಜೆಪಿ ನಗರದ ಸೈಯದ್ ನದೀಮ್ (20) ಎಂಬುವವರನ್ನು ಬಂಧಿಸಲಾಗಿತ್ತು. ಇವರ ವಿಚಾರಣೆ ನಂತರ ಇನ್ನಷ್ಟು ಆರೋಪಿಗಳನ್ನು ಬಂಧಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.