ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಜಗಳ ಬಿಡಿಸಲು ಹೋದ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಪ್ರಕರಣ ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೂಳೆಬೈಲಿನ ನಿವಾಸಿಗಳಾದ ಸಲೀಮ್(22), ಅಬ್ದುಲ್(23) ಎಂಬುವವರ ಕೊಲೆ ಪ್ರಕರಣ ಸಂಬಂಧ ದಾದಾಪೀರ್(21) ಹಾಗೂ ಅಲ್ಲಾಭಕ್ಷಿ (21) ಬಂಧಿಸಲಾಗಿದೆ.
READ | ಆಯನೂರು ಗೇಟ್ ಬಳಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿ ಅರೆಸ್ಟ್
ಸೂಳೆಬೈಲಿನಲ್ಲಿ ಟಿಪ್ಪು ಎಂಬಾತ ತನ್ನ ಮನೆಯಲ್ಲಿ ಜಗಳವಾಡುತ್ತಿದ್ದ. ಆಗ ಅದನ್ನು ವಿಚಾರಿಸುವುದಕ್ಕಾಗಿ ಸಲೀಮ್ ಮತ್ತು ಅಬ್ದುಲ್ ಹೋಗಿದ್ದಾರೆ. ಆಗ ತಮ್ಮ ಮನೆಯ ವಿಚಾರಕ್ಕೆ ಬರದಂತೆ ಟಿಪ್ಪು ಎಚ್ಚರಿಸಿದ್ದಾನೆ. ಇದೇ ವಿಚಾರವಾಗಿ ಟಿಪ್ಪು ತನ್ನ ಸ್ನೇಹಿತರಾದ ಅಲ್ಲಾಭಕ್ಷಿ, ಜಬೀವುಲ್ಲಾ, ದಾದಾಪೀರ್, ವಸೀಂ ಮತ್ತು ನಸ್ರುಲ್ಲಾ ಅವರೊಂದಿಗೆ ಸೇರಿ ತುಂಗಾನಗರ ಠಾಣಾ ವ್ಯಾಪ್ತಿಯ ಸೂಳೇಬೈಲು 7ನೇ ಕ್ರಾಸ್ ರಸ್ತೆಯಲ್ಲಿ ಸಲೀಂ ಮತ್ತು ಅಬ್ದುಲ್ ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
https://www.suddikanaja.com/2021/07/17/real-date-of-birth-of-tippu-sultan/