ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ತಾಲೂಕಿನ ಹಳೆ ಹೊನ್ನಾಪುರದಲ್ಲಿ ಮನೆಯ ಸಮೀಪ ಒಣಗಿಸಲು ಹಾಕಿದ್ದ ಸಿಪ್ಪೆಗೋಟು ಅಡಿಕೆ ಕಳ್ಳತನ ಮಾಡಲಾಗಿದೆ.
ರಮೇಶ್ ಎಂಬುವವರು ಒಣಗಿಸಲು ಹಾಕಿದ್ದ ಅಡಿಕೆ ಕಳ್ಳತನ ಮಾಡಲಾಗಿದೆ. ಅಂದಾಜು 20 ಸಾವಿರ ರೂ. ಮೌಲ್ಯದ 250 ಕೆಜಿಯಷ್ಟು ಸಿಪ್ಪೆಗೋಟು ಅಡಿಕೆ ಕಳ್ಳತನ ಮಾಡಲಾಗಿದೆ.
READ | ಕಂದಕಕ್ಕೆ ಉರುಳಿದ ಲಾರಿ, ಕ್ಲೀನರ್ ಸ್ಥಳದಲ್ಲೇ ಸಾವು
ರಮೇಶ್ ಅವರು ತಮ್ಮ ಮನೆಯ ಸಮೀಪ ಅಡಿಕೆಯನ್ನು ಒಣಗಿಸಲು ಹಾಕಿದ್ದರು. ರಾತ್ರಿ 11 ಗಂಟೆಕ್ಕೆ ಬಂದು ನೋಡಿದಾಗ ಹಾಗೆಯೇ ಇತ್ತು. ಆದರೆ, ಬೆಳಗ್ಗೆ 6 ಗಂಟೆಯ ಸುಮಾರಿಗೆ ಎದ್ದು ವೀಕ್ಷಿಸಿದಾಗ ಅಡಿಕೆ ಕಳ್ಳತನವಾಗಿತ್ತು. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.