ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಪದ್ಮಾ ಟಾಕೀಸ್ ಸಮೀಪದ ಶಾಲೆಯೊಂದರ ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಗುರುವಾರ ಸಂಜೆ ಕಲ್ಲು ತೂರಾಟ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಗೋಪಾಳದ ಪದ್ಮಾ ಟಾಕೀಸ್ ಬಳಿಯ ವೆಂಕಟೇಶ್(48) ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ. ಸಾಕು ನಾಯಿಯೊಂದಿಗೆ ವಾಕಿಂಗ್ ಗೆ ಬಂದಾಗ ನಾಲ್ಕು ಜನ ಸೇರಿ ಕ್ಷುಲ್ಲಕ ಕಾರಣಕ್ಕೆ ಈತನ ಮೇಲೆ ಹಲ್ಲೆ ಮಾಡಿದ್ದಾರೆ.
READ | ಆಗುಂಬೆ ಘಾಟಿಯಲ್ಲಿ 10 ದಿನ ಸಂಚಾರ ನಿಷೇಧ, ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ
ಗಾಯಗೊಂಡ ವೆಂಕಟೇಶ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ತಲೆ ಮತ್ತು ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ನೀಡಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಹರ್ಷನ ಕೊಲೆ ಬಳಿಕ ಶಿವಮೊಗ್ಗ ಶಾಂತ ಸ್ಥಿತಿಗೆ ಮರಳುತ್ತಿದೆ. ಹೀಗಿರುವಾಗ, ಕೆಲವರು ಉರ್ದು ಭಾಷೆಯಲ್ಲಿ ಬೈಯ್ದಿದ್ದಾರೆ. ಹಲ್ಲೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕು . ಇಂತಹ ಘಟನೆಗಳು ಮರು ಕಳುಹಿಸದಂತೆ ಖಡಕ್ ಹೆಜ್ಜೆ ಇಡಬೇಕು. ಈ ಬಗ್ಗೆ ಪೊಲೀಸರಿಗೂ ಸೂಚನೆ ನೀಡಲಾಗಿದೆ. ಕಾನೂನು ವಿರೋಧಿ ಚಟುವಟಿಕೆ ಮಾಡುವವರಲ್ಲಿ ಪೊಲೀಸ್ ಭಯ ಮೂಡಬೇಕು.
– ಬಿ.ವೈ.ರಾಘವೇಂದ್ರ, ಸಂಸದರು
ಸಂಸದರು ಸೇರಿ ಪ್ರಮುಖರ ದೌಡು
ವಿಷಯ ತಿಳಿಯುತ್ತಿದ್ದಂತೆಯೇ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಪ್ರಮುಖರಾದ ಎಸ್.ದತ್ತಾತ್ರಿ, ದೀನದಯಾಳು, ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಹಲವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದರು. ಗಾಯಗೊಂಡಿರುವ ವಿಶ್ವನಾಥ್ ಅವರ ಆರೋಗ್ಯವನ್ನು ವಿಚಾರಿಸಿದರು.
READ | ಇದು ಸಿಟಿಜಿನ್ ವಾಯ್ಸ್ , ಸ್ವಚ್ಚ ಭಾರತದ ಕನಸು ಭಗ್ನ, ಅಧಿಕಾರಿಗಳೇ ಈಗಲಾದರೂ ಎಚ್ಚೆತ್ತುಕೊಳ್ಳಿ…
ಗಾಯಾಳು ವೆಂಕಟೇಶ್ ಹೇಳಿದ್ದಿಷ್ಟು
ಆರೋಗ್ಯದ ಬಗ್ಗೆ ವಿಚಾರಿಸಲು ಬಂದ ಬಿಜೆಪಿ ಮುಖಂಡರೊಂದಿಗೆ ಮಾತನಾಡಿದ ವಿಶ್ವನಾಥ್, `ನಾಯಿಯನ್ನು ನಾಯಿಯೊಂದಿಗೆ ಹೊರಗಡೆ ಬಂದಿದ್ದು, ನಾಲ್ವರು ಯುವಕರು ಎದುರುಗಡೆ ನಿಂತಿದ್ದರು. ನನ್ನ ಕಡೆಗೆ ನೋಡಿ ಸುಖಾ ಸುಮ್ಮನೆ ಕ್ಯಾತೆ ತೆಗೆದರು. ನನ್ನ ಕಡೆಗೆ ಯಾಕೋ ನೋಡ್ತಿಯಾ ಅಂದರು. ಅದಕ್ಕೆ ನಾನೆಲ್ಲಿ ನೋಡಿದ್ದೇನೆ ಎಂದು ಹೇಳಿದ್ದಕ್ಕೆ ಅವಾಚ್ಯವಾಗಿ ಬೈಯ್ದು ಹಲ್ಲೆ ಮಾಡಿದರು. ನಂತರ ಪರಾರಿಯಾಗಿದ್ದಾರೆ.’
https://www.suddikanaja.com/2022/02/09/nine-people-have-been-arrested-due-to-hijab-saffron-shawl-controversy-riot-at-shimoga-town/