ಸುದ್ದಿ ಕಣಜ.ಕಾಂ | DISTRICT | UKRAINE
ಸಾಗರ: ಉಕ್ರೇನ್ ನಲ್ಲಿ ವೈದ್ಯಕೀಯ ಪದವಿ ಓದುತ್ತಿರುವ ಸಾಗರದ ಮನಿಷಾ ಬೆಂಗಳೂರಿಗೆ ಬುಧವಾರ ಬಂದಿದ್ದಾರೆ. ಪೋಲೆಂಡ್ ಮಾರ್ಗವಾಗಿ ದೆಹಲಿಗೆ ಬಂದಿರುವ ಮನಿಷಾ ಸತತ ಆರು ದಿನಗಳ ಕಾಲ ಖಾಸಗಿ ವಾಹನದಲ್ಲಿ ಪ್ರಯಾಣಿಸಿ ಬೆಂಗಳೂರಿಗೆ ಬಂದಿದ್ದಾರೆ.
READ | ಉಕ್ರೇನ್ ನಲ್ಲಿ ಶಿವಮೊಗ್ಗದ ಇಬ್ಬರು, ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?
ಇನ್ನೂ ಎರಡು ತಿಂಗಳು ವ್ಯಾಸಾಂಗವಿತ್ತು
ಕೇವಲ ಎರಡು ತಿಂಗಳು ಉಕ್ರೇನ್ ನಲ್ಲಿ ಎಂಬಿಬಿಎಸ್ ವ್ಯಾಸಾಂಗ ಮಾಡುವುದು ಬಾಕಿ ಇತ್ತು. ಇನ್ನೇನು ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿಯೇ ಈ ಘಟನೆ ನಡೆದಿದೆ. ಹೀಗಾಗಿ, ಅನಿವಾರ್ಯವಾಗಿ ವಾಪಸ್ ಬಂದಿದ್ದಾರೆ.