ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ವಾಕಿಂಗ್ ಗೆ ಹೋಗಿ ವಾಪಸ್ ಮರಳುವಾಗ ವ್ಯಕ್ತಿಯೊಬ್ಬರ ಮೇಲೆ ಕಲ್ಲು ತೂರಾಟ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಅಣ್ಣಾನಗರದ ಸೈಯದ್ ಸುಬಾನ್ (18), ಸಲ್ಮಾನ್ (20) ಎಂಬುವವರನ್ನು ಬಂಧಿಸಲಾಗಿದೆ. ಪದ್ಮಾ ಟಾಕೀಸ್ ಎದುರು ಗೋಪಾಳದ ವೆಂಕಟೇಶ್ (48) ಎಂಬುವವರು ನಾಯಿಯನ್ನು ಹಿಡಿದುಕೊಂಡು ವಾಕಿಂಗ್ ಗೆ ಹೋಗಿ ವಾಪಸ್ ಮನೆಗೆ ಬರುವಾಗ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ.
READ | ಪದ್ಮಾ ಟಾಕೀಸ್ ಬಳಿ ವ್ಯಕ್ತಿಯೊಬ್ಬರ ಮೇಲೆ ಕಲ್ಲು ತೂರಾಟ, ಸಂಸದ ಸೇರಿ ಬಿಜೆಪಿ ಪ್ರಮುಖರು ಆಸ್ಪತ್ರೆಗೆ ದೌಡು
ನಡೆದಿದ್ದೇನು?
ಪ್ರಕರಣದ ಆರೋಪಿಗಳಾದ ಸಲ್ಮಾನ್, ಸೈಯ್ಯದ್ ಸುಬಾನ್ ಮತ್ತು ಅಸ್ಲಂ ಅವರು ಟಿಪ್ಪುನಗರದ ವೈನ್ ಶಾಪ್ ನಲ್ಲಿ ಕುಡಿದು ಹೊರಗೆ ಬಂದಾಗ ವೈನ್ ಶಾಪ್ ರಸ್ತೆಯಲ್ಲಿ ಎದುರುಗಡೆ ಬಂದ ಪರಿಚಯದ ಫೋಟೋ ಕ್ಯಾಮೆರಾ ಬಾಡಿಗೆಗೆ ಕೊಡುತ್ತಿದ್ದ ಚಿನ್ನು ಎಂಬಾತನೊಂದಿಗೆ ಫೋಟೋ ಕ್ಯಾಮೆರಾವನ್ನು ಬಾಡಿಗೆಗೆ ಕೊಡುವ ವಿಚಾರವಾಗಿ ಜಗಳ ಮಾಡಲಾಗಿದೆ. ಅದೇ ಸಮಯಕ್ಕೆ ವೆಂಕಟೇಶ್ ಎಂಬುವವರು ವಿದ್ಯಾನಿಕೇತನ ಶಾಲೆಯ ಆವರಣದಿಂದ ನಾಯಿಯನ್ನು ಹಿಡಿದುಕೊಂಡು ಹೊರಗೆ ಬಂದಾಗ `ಯಾಕೋ ನನ್ನನ್ನು ನೋಡುತ್ತೀಯ’ ಎಂದು ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿರುವುದು ವಿಚಾರಣೆಯ ಸಮಯದಲ್ಲಿ ತಿಳಿದು ಬಂದಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2022/02/08/hijab-saffron-controversy-fir-filed-in-many-police-stations-of-shivamogga/