ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಶಂಕರ್ ಮಠ ರಸ್ತೆಯಲ್ಲಿನ ಟಾಟಾ ಶೋ ರೂಂ ಹತ್ತಿರ 1 ಲಕ್ಷ ರೂಪಾಯಿ ವಿಚಾರವಾಗಿ ವ್ಯಕ್ತಿಯೊಬ್ಬರಿಗೆ ಮಂಗಳವಾರ ರಾತ್ರಿ ಚಾಕು ಇರಿಯಲಾಗಿದೆ.
ಬಾಪೂಜಿನಗರ ಪಾಚಾ ಖಾನ್ (40) ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್.ಎಂ.ಎಲ್ ನಗರದ ದಸ್ತಗಿರ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ.
READ | ಮಹಿಳೆಯರಿಗೆ ಭಿನ್ನವಾಗಿ ಗೌರವ ಸೂಚಿಸಿದ ಗೂಗಲ್, ವೈರಲ್ ಆಯ್ತು ಎನಿಮೇಷನ್, ಏನಿದರ ವಿಶೇಷ?
ಹಣಕಾಸಿನ ವಿಚಾರವಾಗಿ ಗಲಾಟೆ
ಪಾಚಾ ಹಾಗೂ ದಸ್ತಗೀರ್ ನಡುವೆ ಒಂದು ಲಕ್ಷ ರೂಪಾಯಿಗಳ ಹಣಕಾಸಿನ ವಿಚಾರವಾಗಿ ಜಗಳ ನಡೆಯುತ್ತಿದ್ದು ಈ ಸಂದರ್ಭದಲ್ಲಿ ದಸ್ತಗಿರ್ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಕೋಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.