ಸುದ್ದಿ ಕಣಜ.ಕಾಂ | TALUK | CHANDRAGUTTI JATRA
ಸೊರಬ: ಇತಿಹಾಸ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬೆ ಬ್ರಹ್ಮ ರಥೋತ್ಸವ ಶುಕ್ರವಾರ ಅದ್ಧೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವಕ್ಕೆ ಶಿವಮೊಗ್ಗ ಸೇರಿದಂತೆ ಹಾವೇರಿ, ದಾವಣಗೆರೆ, ಹುಬ್ಬಳ್ಳಿ, ಚಿತ್ರದುರ್ಗ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಕೃತಾರ್ಥರಾದರು.
READ | KPSC Recruitment, ಪೊಲೀಸ್ ಇಲಾಖೆಯಲ್ಲಿ ‘ಎ’ ವೃಂದದ ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ
ದೇವಿಗೆ ದೀಡ್ ನಮಸ್ಕಾರ್, ಪಡ್ಲಿಗೆ ಪೂಜೆ, ಎಲೆ ಪೂಜೆ, ಬೇವಿನ ಉಡುಗೆ, ಉರುಳು ಸೇವೆ, ನಂದಾ ದೀಪ ಸೇವೆ, ಬೆಳ್ಳಿ ವಸ್ತುಗಳ ಅರ್ಪಣೆ, ಎಲೆ ಕತ್ತರಿ ಪೂಜೆ, ಉಡಿ ತುಂಬುವುದು ವಿವಿಧ ರೀತಿಯ ಪೂಜೆ ಕೈಂಕರ್ಯಗಳು ನಡೆದವು.
ಪ್ರತಿ ವರ್ಷ ಶಿವರಾತ್ರಿಯಾದ 9ನೇ ದಿನಕ್ಕೆ ಮಹಾರಥೋತ್ಸವ ಜರುಗುತ್ತದೆ. ಇಲ್ಲಿಯ ಪರಶುರಾಮ, ಮಾತಂಗಿ ಅಮ್ಮ, ಕಾಲಭೈರವ, ಶೂಲದ ಬೀರಪ್ಪ, ದುರ್ಗಮ್ಮ, ಬನಶಂಕರಿ ಅಮ್ಮ ಸೇರಿ ಗ್ರಾಮ ದೇವರುಗಳಿಗೆ ವಿಶೇಷ ಪೂಜೆ ಮಾಡಲಾಯಿತು.
ಭಕ್ತಾದಿಗಳಿಗೆ ಬಸ್ ವ್ಯವಸ್ಥೆ
ಶಿವಮೊಗ್ಗದ ನೆರೆ ಜಿಲ್ಲೆಗಳು ಮಾತ್ರವಲ್ಲದೇ ಉತ್ತರ ಕರ್ನಾಟಕ ಭಾಗದಿಂದಲೂ ಸಾಕಷ್ಟು ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ, ಅವರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆನವಟ್ಟಿ, ಜಡೆ, ಶಿರಾಳಕೊಪ್ಪ ಮಾರ್ಗವಾಗಿ ಹೆಚ್ಚುವರಿ ಬಸ್ ಸೇವೆ ನೀಡಲಾಗಿತ್ತು.
ಉಪ ವಿಭಾಗಾಧಿಕಾರಿಯಿಂದ ರಥೋತ್ಸವಕ್ಕೆ ಚಾಲನೆ
ರಥೋತ್ಸವಕ್ಕೆ ಉಪ ವಿಭಾಗಾಧಿಕಾರಿ ಡಾ.ನಾಗರಾಜ್ ಅವರು ಶುಕ್ರವಾರ ಚಾಲನೆ ನೀಡಿದರು. ಪುರೋಹಿತರ ಸಮ್ಮುಖದಲ್ಲಿ ದೇವತೆಗಳಿಗೆ ಅನ್ನ ಮತ್ತು ಸೊಪ್ಪಿನಿಂದ ಮಿಶ್ರಣ ಮಾಡಿದ ಆಹಾರವನ್ನು ಬಲಿ ನೀಡಲಾಯಿತು.
READ | ಕಳೆದ ವರ್ಷದ ಹೋಲಿಕೆಯಲ್ಲಿ ಈ ವರ್ಷ ಮಾಂಸ, ಶೇ.5, ಮೊಟ್ಟೆ ಉತ್ಪಾದನೆ ಶೇ.10ರಷ್ಟು ಏರಿಕೆ
ಸಂಘ ಸಂಸ್ಥೆಗಳಿಂದ ಅನ್ನ ಸಂತರ್ಪಣೆ, ಬೆಲ್ಲ ನೀರು ವಿತರಣೆ, ರೇಣುಕಾಂಬ ಸೇವಾ ಟ್ರಸ್ಟ್ ನಿಂದ ಮಜ್ಜಿಗೆ ವಿತರಣೆ ಮಾಡಲಾಯಿತು. ರೈತರು ತಾವು ಬೆಳೆದ ಅಡಿಕೆ, ಬಾಳೆ ಫಲವನ್ನು ರಥಕ್ಕೆ ಸಮರ್ಪಿಸಿದರು.
ಈ ವೇಳೆ ತಹಸೀಲ್ದಾರ್ ಮಂಜುಳಾ ಹೆಗಡಾಳ್, ಉಪ ತಹಸೀಲ್ದಾರ್ ವೆಂಕಟೇಶ್, ದೇವಸ್ಥಾನ ಸಮಿತಿಯ ಕಾರ್ಯ ನಿರ್ವಹಣಾಧಿಕಾರಿ ರಂಗಪ್ಪ, ಚಂದ್ರಗುತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ.ರತ್ನಾಕರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಗಣಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೋಟೆ ಶ್ರೀ ಮಾರಿಕಾಂಬ ಜಾತ್ರೆ, ನೆರವೇರಿದ ಚಪ್ಪರ ಪೂಜೆ, ಯಾವ ದಿನ ಏನು ನಡೆಯಲಿದೆ?