ಸುದ್ದಿ ಕಣಜ.ಕಾಂ | CITY | WATER SUPPLY
ಶಿವಮೊಗ್ಗ: ಮಾರಿಕಾಂಬ ಜಾತ್ರೆ ಆರಂಭವಾಗಲಿದ್ದು, ನಾನಾ ಭಾಗಗಳಿಂದ ನಗರಕ್ಕೆ ಸಾಕಷ್ಟು ಜನರು ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ಸಹಜವಾಗಿಯೇ ನೀರಿನ ಬೇಡಿಕೆ ಹೆಚ್ಚುತ್ತದೆ. ಇದಕ್ಕಾಗಿ ಈಗಿನಿಂದಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಖಡಕ್ ವಾರ್ನಿಂಗ್ ನೀಡಿದರು.
READ | ಶಿವಮೊಗ್ಗದಾದ್ಯಂತ ಹೈ ಸೆಕ್ಯೂರಿಟಿ, ಎಲ್ಲೆಲ್ಲಿ ಎಷ್ಟು ಭದ್ರತೆ, ಇಲ್ಲಿದೆ ಮಾಹಿತಿ
ನಗರದ ಮಂಡ್ಲಿಯಲ್ಲಿರುವ ನೀರು ಸರಬರಾಜು ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಅವರು, ಮೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಾಜನೂರು ಡ್ಯಾಂನಿಂದ ನೀರು ಬಿಡುಗಡೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ಜೊತೆಗೆ, ನೀರು ಹರಿದು ಹೋಗದಂತೆ ಕ್ರಮಕೈಗೊಳ್ಳುವುದಕ್ಕಾಗಿ ನೀರು ಪೂರೈಕೆ ಕೇಂದ್ರದ ಸಮೀಪ ಮರಳಿನ ಚೀಲ ಅಡ್ಡವಾಗಿ ಹಾಕಬೇಕು. ಇದನ್ನು ಶೀಘ್ರ ಮಾಡಬೇಕು ಎಂದು ತಿಳಿಸಿದರು.
ವಾರದಿಂದ ನೀರು ಪೂರೈಕೆಯಲ್ಲಿ ತೊಂದರೆ
ನಗರ ವ್ಯಾಪ್ತಿಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿವೆ. ಮೆಸ್ಕಾಂ ಮತ್ತು ಜಲಮಂಡಳಿ ಸರಿಯಾದ ಸಮನ್ವಯದೊಂದಿಗೆ ಉತ್ತಮ ಸೇವೆ ನೀಡಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ವಿದ್ಯುತ್ ವ್ಯತ್ಯಯ ಮಾಡವುದಾದರೆ ಮುಂಚೆಯೇ ಜಲಮಂಡಳಿಗೆ ಮಾಹಿತಿ ನೀಡಬೇಕು. ಇದರಿಂದ ಮುನ್ನೆಚ್ಚರಿಕೆ ವಹಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
READ | ಮಾ.15ರಂದು ಶಾಲಾ, ಕಾಲೇಜಿಗೆ ರಜೆ, ಏನೇನು ನಿರ್ಬಂಧ ಇರಲಿವೆ, ಆದೇಶದಲ್ಲಿ ಏನಿದೆ?
ಮಹಾನಗರ ಪಾಲಿಕೆ ಉಪ ಮೇಯರ್ ಶಂಕರ್ ಗನ್ನಿ, ಆಯುಕ್ತ ಮಾಯಣ್ಣ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿತಾ ರವಿಶಂಕರ್, ಧೀರರಾಜ್ ಹೊನ್ನವಿಲೆ ಹಲವರಿದ್ದರು.
https://www.suddikanaja.com/2022/03/11/kote-sri-marikamba-jatre-chappara-pooje-at-gandhi-bazaar/