ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ನಗರದಲ್ಲಿ ಗುರುವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಬಹು ವರ್ಷಗಳ ಬೇಡಿಕೆಯಾಗಿದ್ದ ಕೇಂದ್ರ ಮಾದರಿ ವೇತನವನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಅತ್ಯಂತ ಸ್ವಾಗತಾರ್ಹವಾಗಿದೆ. ಇದಕ್ಕಾಗಿ, ಬೊಮ್ಮಾಯಿ ಹಾಗೂ ಇದಕ್ಕೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದನೆ ಸಲ್ಲಿಸಿದರು.
READ | ಕೋಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ, ಕಸಾಯಿಖಾನೆ ಸೇರಲಿದ್ದ 39 ಹಸು, ಎಮ್ಮೆಗಳು ಸೇಫ್
ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕೇಂದ್ರದ ಮಾದರಿಯ ವೇತನಕ್ಕಾಗಿ ಒತ್ತಾಯ ಮಾಡಲಾಗುತ್ತಿದೆ. ಆದರೆ, ಬೇಡಿಕೆ ಈಡೇರಿರಲಿಲ್ಲ. ಮುಖ್ಯಮಂತ್ರಿಗಳ ಹೇಳಿಕೆಯಿಂದ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಸಂತೋಷವಾಗಿದೆ. ರಾಜ್ಯದ ಎಲ್ಲ ಕೇಡರ್ ನೌಕರರಿಗೆ ವೇತನ ಹೆಚ್ಚಳವಾಗಲಿದೆ ಎಂದರು.
ವೇತನ ಹೆಚ್ಚಳದಿಂದ ಸರ್ಕಾರಕ್ಕೆ ಹೊರೆಯಾಗದು
ವೇತನ ಪರಿಷ್ಕರಣೆಯಿಂದ ಸರಕಾರಕ್ಕೆ ಕೇವಲ ₹10.8 ಸಾವಿರ ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ಇದು ಭಾರಿ ಹೊರೆಯಲ್ಲ. ರಾಜ್ಯದಲ್ಲಿ ಸುಮಾರು 2.60 ಲಕ್ಷ ಹುದ್ದೆಗಳು ಖಾಲಿ ಇದ್ದು, ಇವುಗಳಿಂದ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಉಳಿತಾಯವಾಗುತ್ತದೆ. ಖಾಲಿ ಹುದ್ದೆಗಳ ಕಾರ್ಯಭಾರ ಈಗಿರುವ ನೌಕರರೇ ನಿರ್ವಹಿಸುತ್ತಿದ್ದಾರೆ ಎಂದರು.
ವೇತನ ಹೆಚ್ಚಳಕ್ಕೆ ತಕ್ಕಂತೆ ಸರಕಾರ ನೌಕರರ ಕೆಲಸದ ವೇಳೆ ಹೆಚ್ಚು ಮಾಡಲು, ಕಾರ್ಯದಕ್ಷತೆ ಹೆಚ್ಚಿಸಲು ಅಥವಾ ಇನ್ಯಾವುದೇ ಟಾಸ್ಕ್ ನೀಡಿದರೂ ಅದನ್ನು ನಿಭಾಯಿಸಲು ನೌಕರ ಸಮುದಾಯ ಸಿದ್ಧವಿದೆ ಎಂದು ಹೇಳಿದರು.
READ | ಪುನೀತ್ ಜನ್ಮದಿನ ಅದ್ಧೂರಿ ಆಚರಣೆ, ನೂರಕ್ಕೂ ಅಧಿಕ ಜನ ನೇತ್ರದಾನ, 2-3 ದಿನ ಥಿಯೇಟರ್ ಹೌಸ್ ಫುಲ್
ಬೆಂಗಳೂರು ವಿಭಾಗದ ಉಪಾಧ್ಯಕ್ಷ ಆರ್. ಮೋಹನ್ ಕುಮಾರ್, ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಮಹಾರುದ್ರಪ್ಪ, ಅರುಣ್ ಕುಮಾರ್, ಸತೀಶ್ ಉಪಸ್ಥಿತರಿದ್ದರು.