ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಕೋಟೆ ಪೊಲೀಸ್ ಠಾಣೆ ಸಿಪಿಐ ಚಂದ್ರಶೇಖರ್ ನೇತೃತ್ವದಲ್ಲಿ ಗುರುವಾರ ಭರ್ಜರಿ ಕಾರ್ಯಾಚರಣೆ ಮಾಡಲಾಗಿದ್ದು, 39 ಹಸು, ಎಮ್ಮೆಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಲಾಗಿದೆ.
READ | ಪುನೀತ್ ಜನ್ಮದಿನ ಅದ್ಧೂರಿ ಆಚರಣೆ, ನೂರಕ್ಕೂ ಅಧಿಕ ಜನ ನೇತ್ರದಾನ, 2-3 ದಿನ ಥಿಯೇಟರ್ ಹೌಸ್ ಫುಲ್
ಅಲೇಮಾನ್ ಕೇರಿಯ ಎರಡು ಮನೆಯಲ್ಲಿ ಪ್ರತ್ಯೇಕವಾಗಿ ಎಮ್ಮೆ, ಕರು, ಮಣಕ ಮತ್ತು ಹಸುಗಳನ್ನು ಕಟ್ಟಿಹಾಕಲಾಗಿತ್ತು. ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದೇ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಪಾಲಿಕೆ ಅಧಿಕಾರಿಗಳು ಭಾಗವಹಿಸಿದ್ದರು.
ರಫಿಕ್ ಎಂಬಾತನ ಶೆಡ್ ನಲ್ಲಿದ್ದ 17 ಮತ್ತು ವಾಸೀಮ್ ಎಂಬಾತನ ಶೆಡ್ ನಲ್ಲಿದ್ದ 22 ಹಸು, ಎಮ್ಮೆಗಳನ್ನು ಪೊಲೀಸರು ಕಾಪಾಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.