ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಅನುಪಿನಕಟ್ಟೆಯ ವಸತಿ ಶಾಲೆಯೊಂದರಲ್ಲಿ ಶುಕ್ರವಾರ ರಾತ್ರಿ ಅಡುಗೆ ಅನಿಲ (Gas) ಸೋರಿಕೆಯಾಗಿದ್ದು, ಭಾರಿ ಅನಾಹುತವೊಂದು ಸ್ವಲ್ಪದ್ದರಲ್ಲೇ ತಪ್ಪಿದೆ.
ಅಡುಗೆ ಮಾಡಿದ ಬಳಿಕ ಸಿಲಿಂಡರ್ ನ ರೆಗ್ಯೂಲೆಟರ್ ಅನ್ನು ಬಂದ್ ಮಾಡಲಾಗಿದೆ. ಆದರೂ ಅಡುಗೆ ಅನಿಲ ಸೋರಿಕೆಯಾಗಿದೆ. ವಾಸನೆಯಿಂದ ಎಚ್ಚೆತ್ತುಕೊಂಡ ವಿದ್ಯಾರ್ಥಿ ಮತ್ತು ಸಿಬ್ಬಂದಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
READ | ನವೆಂಬರ್ ಅಂತ್ಯಕ್ಕೆ ಶಿವಮೊಗ್ಗದಿಂದ ಹಾರಲಿದೆ ವಿಮಾನ, ಇದುವರೆಗೂ ಪೂರ್ಣಗೊಂಡ ಕಾಮಗಾರಿ ಎಷ್ಟು?
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ
ವಸತಿ ಶಾಲೆಯಲ್ಲಿ ಸಾಕಷ್ಟು ಜನ ವಿದ್ಯಾರ್ಥಿಗಳಿದ್ದಾರೆ. ಒಂದುವೇಳೆ, ಗ್ಯಾಸ್ ಸೋರಿಕೆಯಾಗಿದ್ದಾಗ ಬೆಂಕಿಯ ಸ್ಪರ್ಶವಾಗಿದ್ದರೆ ಭಾರಿ ಅನಾಹುತ ಸಂಭವಿಸುತಿತ್ತು. ಆದರೆ, ಅದೃಷ್ಟವಶಾತ್ ಅಂತಹ ಘಟನೆ ನಡೆದಿಲ್ಲ. ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಗ್ಯಾಸ್ ನಿಂದ ಸೋರಿಕೆಯಾಗುತ್ತಿದ್ದ ಅನಿಲವನ್ನು ನಿಲ್ಲಿಸಿದ್ದಾರೆ. ಸಕಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕಾರ್ಯಾಚರಣೆ ಮಾಡಿದ್ದಾರೆ. ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಸೇರಿದಂತೆ ಇತರರು ಕಾರ್ಯಾಚರಣೆ ಮಾಡಿದ್ದಾರೆ.