ಸುದ್ದಿ ಕಣಜ.ಕಾಂ | CITY | MARIKAMBA JATRE
ಶಿವಮೊಗ್ಗ: ಸುಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯಲ್ಲಿ ಅಂಗಡಿಗಳ ಮೇಲೆ ಕೇಸರಿ ಧ್ವಜ ರಾರಾಜಿಸುತಿತ್ತು. ಜಾತ್ರೆ ಪ್ರಯುಕ್ತ ವಿವಿಧ ಅಂಗಡಿಗಳನ್ನು ಹಾಕಲಾಗಿದ್ದು, ಅವುಗಳ ಮೇಲೆ ಧ್ವಜ ಹಾರುತಿತ್ತು.
VIDEO REPORT
ಅನ್ಯಕೋಮಿನವರಿಗೆ ಅಂಗಡಿಗಳನ್ನು ನೀಡುವ ಬಗ್ಗೆ ನಡೆದ ಭಾರಿ ವಾದ ವಿವಾದಗಳ ಬಳಿಕ ವ್ಯಕ್ತಿಯೊಬ್ಬರು ಅಂಗಡಿಗಳ ಟೆಂಡರ್ ಪಡೆದಿದ್ದು, ಹಿಂದೂ ಸಮುದಾಯದವರಿಗೆ ಅಂಗಡಿಗಳ ಸ್ಥಾಪನೆಗೆ ಜಾಗ ನೀಡಲಾಗಿದೆ. ಭಜರಂಗ ದಳ ಕಾರ್ಯಕರ್ತ ಹರ್ಷನ ಫ್ಲೆಕ್ಸ್ ಅನ್ನು ಅಳವಡಿಸಲಾಗಿತ್ತು.
ಕಣ್ಮನ ಸೆಳೆದ ಮಾರಿಕಾಂಬ ಜಾತ್ರೆಯಲ್ಲಿ ಭರ್ಜರಿ ವ್ಯಾಪಾರ
ಮಕ್ಕಳ ಆಟಿಕೆ, ಬೆಂಡು ಬತ್ತಾಸು, ಹಚ್ಚೆ, ಅಲಂಕಾರಿಕ ವಸ್ತುಗಳು ಹೀಗೆ ವಿವಿಧ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತಿತ್ತು. ಜನರು ಖರೀದಿಗೆ ಮುಗಿಬಿದ್ದಿದ್ದರು.