ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಚೆನ್ನಕೊಪ್ಪ ಗ್ರಾಮದ ಮೆಣಸಿನಸರ ಕ್ರಾಸ್ ಬಳಿ ಲಾರಿಯೊಂದು ಎದುಗಡೆ ಬಂದಿದ್ದು ಅದರಿಂದ ತಪ್ಪಿಸಲು ಹೋಗಿ ಕಾರು ಗುಂಡಿಗೆ ಹಾರಿದೆ. ಪರಿಣಾಮ ವಾಹನ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಕ್ರ್ಯೂಟ್ ಹೌಸ್ ಬಳಿಯ ಅಚ್ಯುತ್ ರಾವ್ (72) ಮೃತಪಟ್ಟಿದ್ದಾರೆ. ಇವರ ಪತ್ನಿ ಮೂಕಾಂಬಿಕೆ(65), ಪುತ್ರಿ ಪ್ರೀತಿ (36), ಮೊಮ್ಮಗಳು ಅದಿತಿ(4), ಪಕ್ಕದ ಮನೆಯ ನಿಖಿಲ್ (28) ಎಂಬುವವರು ಗಾಯಗೊಂಡಿದ್ದಾರೆ.
READ | ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಮುಂದುವರಿದ ಲ್ಯಾಪ್ ಟಾಪ್ ಕಳ್ಳತನ, ಒಂದೇ ತಿಂಗಳಲ್ಲಿ 3 ಘಟನೆ
ಯಮಸ್ವರೂಪಿ ಲಾರಿಯಿಂದ ತಪ್ಪಿಸಲು ಹೋಗಿ ಘಟನೆ
ಆಚಾರಪುರ ಬಳಿಯ ಚೆನ್ನಕೊಪ್ಪ ಗ್ರಾಮದ ಹತ್ತಿರ ತಿರುವಿನಲ್ಲಿ ಏಕಾಏಕಿ ಲಾರಿಯೊಂದು ಎದುರುಗಡೆ ಬಂದಿದೆ. ಆಗಬಹುದಾಗಿದ್ದ ಅಪಘಾತವನ್ನು ತಪ್ಪಿಸಲು ಹೋದಾಗ ಕಾರು ರಸ್ತೆ ಪಕ್ಕದ ದೊಡ್ಡ ಗುಂಡಿಯಲ್ಲಿ ಬಿದ್ದಿದೆ. ಅಚ್ಯುತ್ ರಾವ್ ಅವರ ದೇಹವು ಕಾರಿನಲ್ಲಿ ಸಿಲುಕಿದೆ. ನಂತರ ಸಾಗರ ಹೈವೇ ಪ್ಯಾಟ್ರೋಲಿಂಗ್ ಸಿಬ್ಬಂದಿ, ಆಂಬ್ಯುಲೆನ್ಸ್ ನವರು ಸೇರಿ ಅವರನ್ನು ಹೊರಗಡೆ ತೆಗೆದಿದ್ದಾರೆ. ಮೃತ ದೇಹವನ್ನು ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
READ | ಭಾರೀ ಮಳೆ ಸೃಷ್ಟಿಸಿದ ಅನಾಹುತ, ಎರಡು ಮನೆಗಳಿಗೆ ಹಾನಿ, ಧರೆಗುರುಳಿದ ಮರಗಳು