ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ಹಲವು ಬಡಾವಣೆಗಳಲ್ಲಿ ಸರಗಳ್ಳತನ ಮಾಡುತಿದ್ದ ಪ್ರಕರಣಗಳ ನಡುವೆಯೇ ಗ್ರಾಮೀಣ ಭಾಗದಲ್ಲೂ ಈ ಗ್ಯಾಂಗ್ ಸಕ್ರಿಯಗೊಂಡಿದೆ.
ಸಾಗರ ತಾಲೂಕಿನ ಬ್ರಾಹ್ಮಣ ಮಂಚಾಲೆಯಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪ್ರಭಾವತಿ ಎಂಬುವವರ ಸರವನ್ನು ಅಪರಿಸಲಾಗಿದೆ.
ಮುಖಕ್ಕೆ ಸ್ಕಾರ್ಫ್ ಬೈಕ್ ನಲ್ಲಿ ಬಂದವರಿಂದ ಕೃತ್ಯ
ಶಿಕ್ಷಕಿಯು ಬಸ್ ನಿಂದ ಇಳಿದು ಕಾಡಿನಲ್ಲಿ ನಡೆದುಕೊಂಡು ಹೋಗುವಾಗ ಬೈಕ್ ನಲ್ಲಿ ಬಂದವರೇ ಸರವನ್ನು ದೋಚಿದ್ದಾರೆ. ಸರಗಳ್ಳರು ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡಿದ್ದರು ಎಂದು ತಿಳಿದುಬಂದಿದೆ.
ಮಾಂಗಲ್ಯ, ಚಿನ್ನದ ಸರ ಕಳವು
30 ಗ್ರಾಂ ಚಿನ್ನದ ಮಾಂಗಲ್ಯ, 20 ಗ್ರಾಂ ಸರವನ್ನು ದೋಚಲು ಮುಂದಾದಾಗ ಶಿಕ್ಷಕಿಯು ಪ್ರತಿರೋಧ ಒಡ್ಡಿದ್ದಾರೆ. ತಕ್ಷಣ ಆಕೆಯನ್ನು ಪಕ್ಕದಲ್ಲಿಯೇ ಇದ್ದ ಚರಂಡಿಗೆ ತಳ್ಳಲಾಗಿದೆ. ಕೆಳಗೆ ಬಿದ್ದ ಪ್ರಭಾವತಿ ಅವರ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ, ಸರವನ್ನು ದೋಚಿದ್ದಾರೆ. ಗಾಯಗೊಂಡ ಪ್ರಭಾವತಿ ಅವರಿಗೆ ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.